ರಾಜಕೀಯ

ಅನುದಾನಕ್ಕಾಗಿ ಸಚಿವ ಮಹಾದೇವಪ್ಪ ಜಪಾನ್‌ಗೆ

Vishwanath S

ಬೆಂಗಳೂರು: ಬೆಂಗಳೂರು ಮಹಾನಗರ ಹೊರ ವರ್ತುಲ ರಸ್ತೆ ಹಾಗೂ ಶಿರಾಡಿಘಾಟ್ ಸುರಂಗ ಮಾರ್ಗ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹಾದೇವಪ್ಪ ಜೂನ್ 21ರಂದು ಜಪಾನ್‍ಗೆ ತೆರಳಲಿದ್ದಾರೆ.

ಬೆಂಗಳೂರು ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ರು.5,680 ಕೋಟಿ ಮತ್ತು ಶಿರಾಡಿಘಾಟ್ ಸುರಂಗ ಮಾರ್ಗ ನಿರ್ಮಾಣಕ್ಕೆ ರು.9,000 ಕೋಟಿ ಆರ್ಥಿಕ ಸಹಾಯವನ್ನು ಜೈಕಾದಿಂದ ಕೋರಲಾಗಿದೆ. ಆದರೆ, ಹಣ ಇನ್ನೂ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜೈಕಾ ಜತೆ ಚರ್ಚೆ ನಡೆಸುವುದಕ್ಕಾಗಿ ಅವರು ಜಪಾನ್‍ಗೆ ತೆರಳಲಿದ್ದಾರೆ.

SCROLL FOR NEXT