ರಾಜಕೀಯ

ಏಜೆಂಟರೆಂದು ಸಾಬೀತುಪಡಿಸಿದರೆ ನಿವೃತ್ತಿ

Srinivasamurthy VN

ಬೆಂಗಳೂರು: ಪಕ್ಷಕ್ಕಾಗಿ ದುಡಿದ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಏಜೆಂಟ್‍ಗಳು ಎಂದು ಸಾಬೀತು ಪಡಿಸಿದರೆ, ನಾನು ರಾಜಕೀಯವಾಗಿ ನಿವೃತ್ತಿಯಾಗುವೆ ಎಂದು ಮಾಗಡಿ ಕ್ಷೇತ್ರದ ಶಾಸಕ  ಎಚ್.ಸಿ.ಬಾಲಕೃಷ್ಣ ಸವಾಲು ಹಾಕಿದ್ದಾರೆ.

ನಾವು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇವೆ ಎನ್ನುವುದಕ್ಕೆ ಯಾವುದಾದರೂ ಒಂದು ಉದಾಹರಣೆ ನೀಡಲಿ. ಅದನ್ನು ಸಾಬೀತುಪಡಿಸಲಿ. ಆಗ ನಿಜಕ್ಕೂ ನಾವು ಅವರ ಕ್ರಮವನ್ನು ಒಪ್ಪುತ್ತೇವೆ.  ಪಕ್ಷವನ್ನೂ ಬಿಡುತ್ತವೆ. ಜತೆಗೆ ರಾಜಕೀಯದಿಂದಲೂ ನಿವೃತ್ತಿಯಾಗುತ್ತೇವೆ ಎಂದು ಕನ್ನಡಪ್ರಭಗೆ ಪ್ರತಿಕ್ರಿಯಿಸಿದ್ದಾರೆ. ಡಿ.3ರಂದು ನಡೆಯುವ ಜೆಡಿಎಸ್ ಕಾರ್ಯಕಾರಿಣಿಯಲ್ಲಿ ಪಕ್ಷದ ನಾಯಕರಿಗೆ ಅಜೆಂಡಾ ಇದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ, ನಮಗಂತೂ ಅಜೆಂಡಾ ಇದೆ. ಪಕ್ಷದ ಶಾಸಕರ ವಿರುದಟಛಿ ಅನಗತ್ಯವಾಗಿ ಬಂದಿರುವ ದೂರುಗಳ ಬಗ್ಗೆ ಪಕ್ಷದ ವರಿಷ್ಠರಾದ  ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಬೇಕು. ನಮ್ಮ ಕ್ರಮ, ಸರಿಯೋ ತಪೊ್ಪೀ ಎಂಬುದನ್ನು ಹೇಳಬೇಕು. ಹಾಗೆಯೇ ಕುಮಾರಸ್ವಾಮಿ ಕೂಡಾ ಕ್ಷಮೆ ಯಾಚಿಸಬೇಕು ಎಂದು ಬಾಲಕೃಷ್ಣ  ಹೇಳಿದ್ದಾರೆ.

SCROLL FOR NEXT