ರಾಜಕೀಯ

ಜಿಪಂ ಗೆ ಈಶ್ವರಪ್ಪ ಪುತ್ರ ಸ್ಪರ್ಧೆ

Mainashree
ಶಿವಮೊಗ್ಗ: ದೇವೇಗೌಡರ ಕುಟುಂಬ ರಾಜಕಾರಣ ವಿರೋಧಿಸಿದ್ದ ಬಿಎಸ್ ವೈ ಅವರ ಪುತ್ರನಿಗೆ ಲೋಕಸಭಾ ಟಿಕೆಟ್ ಸಿಕ್ಕಾಗ ಅಸಮಾಧಾನಗೊಂಡಿದ್ದ ಕೆ.ಎಸ್.ಈಶ್ವರಪ್ಪ ಅವರು ಈಗ ಕುಟುಂಬ ರಾಜಕಾರಣಕ್ಕೆ ಅಡಿ ಇಟ್ಟಿದ್ದಾರೆ. ಪುತ್ರ. ಕೆ.ಇ.ಕಾಂತೇಶ್ ಅವರಿಗೆ ಬಿಜೆಪಿ ಶಿವಮೊಗ್ಗ ಹೊಳಲೂರು ಜಿಪಂ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. 
ಕುಟುಂಬ ರಾಜಕಾರಣ ವಿರೋಧಿಸಿ ಪಕ್ಷದಲ್ಲಿ ಭಾರಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಸ್.ಎನ್. ಚನ್ನಬಸಪ್ಪ ಅವರು ಪಕ್ಷದ ಎಳ್ಲಾ ಹುದ್ದೆಗಳಿಗೆ ರಾಜಿನಾಮೆ ಸಲ್ಲಿಸಿದ್ದು, ಬಿಜೆಪಿ ಕಚೇರಿ ಎದುರು ಟಿಕೆಟ್ ವಂಚಿತರು ಧರಣಿ ನಡೆಸಿದ್ದಾರೆ. ನಿರ್ದಿಷ್ಟವಾಗಿ ಕಾಂತೇಶ್ ಅವರಿಗೆ ಟಿಕೆಟ್ ಕೊಡುವುದನ್ನು ಅವರು ವಿರೋಧಿಸಿಲ್ಲವಾದರೂ ಅವರ ರಾಜಿನಾಮೆ ಪತ್ರದಲ್ಲಿ ಈ ಭಾವ ಸ್ಪಷ್ಟವಾಗಿದೆ. 
ಇದೆಲ್ಲದರ ನಡುವೆಯೂ ಟಿಕೆಟ್ ದೊರಕಿದೆ. ಈ ಬಗ್ಗೆ ಪಕ್ಷದ ಜಿಲ್ಲಾಧ್ಯಕ್ಷ ದತ್ತಾತ್ರಿ ಅವರು, ಕಾಂತೇಶ್ ಅವರ ಸ್ಪರ್ಥೆ ಕುಟುಂಬ ರಾಜಕಾರಣದ ವ್ಯಾಪ್ತಿಗೆ ಬರುವುದಿಲ್ಲ. 10 ವರ್ಷದಿಂದ ಬಿಜೆಪಿಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಹೊಳಲೂರು ಕ್ಷೇತ್ರ ಕಾರ್ತಕರ್ತರೂ ಇವರ ಉಮೇದುವಾರಿಕೆ ಬೆಂಬಲಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
SCROLL FOR NEXT