ರಾಜಕೀಯ

ಅಹಂಕಾರ ಪಕ್ಕಕ್ಕಿಟ್ಟು ಸಿಎಂ ಕೆಎಸ್ ಐಆರ್ ಟಿಸಿ ನೌಕರರ ಜೊತೆ ಸಂಧಾನ ನಡೆಸಲಿ: ಜನಾರ್ಧಾನ ಪೂಜಾರಿ

Shilpa D

ಬೆಂಗಳೂರು: ಮಷ್ಕರ ಕೈಗೊಂಡಿರುವ ಕೆಎಸ್ ಆರ್ ಟಿ ಸಿ ನೌಕರರ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ಜನ ಸಾಮಾನ್ಯರಿಗೆ ಉಂಟಾಗುತ್ತಿರುವ ತೊಂದರೆ ತಪ್ಪಿಸುವಂತೆ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಲಹೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ತಮ್ಮ ಅಹಂಕಾರವನ್ನು ಪಕ್ಕಕ್ಕಿಟ್ಟು, ಯಾವಾಗಲು ಹೇಳುವ ಹಳೇಯ ಡೈಲಾಗ್ ಗಳನ್ನು ಬಿಟ್ಟು ನೌಕರರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಬಗೆ ಹರಿಸುವ ಯತ್ನ ನಡೆಸಬೇಕು ಎಂದು ಪೂಜಾರಿ ಸೂಚಿಸಿದ್ದಾರೆ.

ರಾಜ್ಯದ ಜನತೆ ಅತೀವ ನಂಬಿಕೆ, ವಿಶ್ವಾಸಗಳನ್ನಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಿದ್ದಾರೆ. ಸಿಎಂ ಜನತೆಯ ನಂಬಿಕೆಗಳನ್ನು ಹುಸಿಗೊಳಿಸಬಾರದು ಎಂದು ಕಿವಿಮಾತು ಹೇಳಿದ್ದಾರೆ.

SCROLL FOR NEXT