ಖಮರುಲ್ ಇಸ್ಲಾಂ 
ರಾಜಕೀಯ

ಅತೃಪ್ತರಿಗೆ ಕೊನೆಗೂ ಕೃಷ್ಣ ದರ್ಶನ: ಉಲ್ಟಾ ಹೊಡೆದ ಖಮರುಲ್ ಇಸ್ಲಾಂ

ಅತೃಪ್ತ ಶಾಸಕರಿಗೆ ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದರ್ಶನವಾಗಿದೆ. ಸಂಪುಟ ಪುನಾರಚನೆಯಿಂದಾಗಿ ಸಾಕಷ್ಟು ಅಸಮಾಧಾನಗೊಂದಿದ್ದ ಭಿನ್ನ ಶಾಸಕರು ಹಲವು ದಿನಗಳಿಂದಲೂ ಕೃಷ್ಣ ಅವರನ್ನು ಭೇಟಿ ಮಾಡಲು...

ಬೆಂಗಳೂರು: ಅತೃಪ್ತ ಶಾಸಕರಿಗೆ ಕೊನೆಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ದರ್ಶನವಾಗಿದೆ. ಸಂಪುಟ ಪುನಾರಚನೆಯಿಂದಾಗಿ ಸಾಕಷ್ಟು ಅಸಮಾಧಾನಗೊಂದಿದ್ದ ಭಿನ್ನ ಶಾಸಕರು ಹಲವು ದಿನಗಳಿಂದಲೂ ಕೃಷ್ಣ ಅವರನ್ನು ಭೇಟಿ ಮಾಡಲು ನಿರೀಕ್ಷಿಸುತ್ತಿದ್ದರು. ಇದರಂತೆ ಮಂಗಳವಾರ ಕೃಷ್ಣ ಅವರನ್ನು ಭೇಟಿ ಮಾಡಿ ಭಿನ್ನ ಶಾಸಕರು ಮಾತುಕತೆ ನಡೆಸಿದ್ದಾರೆ.

ಮಾತುಕತೆ ವೇಳೆ ಖಮರುಲ್ ಇಸ್ಲಾಂ ಹಾಗೂ ಶಾಸಕ ಎ.ಬಿ. ಮಾಲಕ ರೆಡ್ಡಿಯವರು ಕೃಷ್ಣ ಅವರಿಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಆಗುತ್ತಿರುವ ಬೆಳವಣಿಗೆ ಕುರಿತಂತೆ ವಿವರಣೆ ನೀಡಿದ್ದಾರೆ. ಅಲ್ಲದೆ, ವಿಚಾರವನ್ನು ಪಕ್ಷದ ಹೈ ಕಮಾಂಡ್ ಗಮನಕ್ಕೆ ತರುವಂತೆ ಆಗ್ರಹಿಸಿದ್ದಾರೆ.

ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಖಮರುಲ್ ಇಸ್ಲಾಂ ಅವರು, ಎಸ್.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಮಾತುಕತೆ ವೇಳೆ ಪಕ್ಷದ ವರ್ಚಸ್ಸು ಹಾಗೂ ಆಶಯಗಳಿಗೆ ತೊಂದರೆಯಾಗದಂತೆ ಸಂಯಮ ಕಾಪಾಡುವಂತೆ ಕೃಷ್ಣ ಅವರು ಸಲಹೆ ನೀಡಿದ್ದಾರೆ. ಅಲ್ಲದೆ, ಸಮಸ್ಯೆಯನ್ನು ರಂಜಾನ್ ಬಳಿಕ ಹೈ ಕಮಾಂಡ್ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದ್ದಾರೆ.

ಶ್ರೀನಿವಾಸ ಪ್ರಸಾದ್ ಹಾಗೂ ಅಂಬರೀಷ್ ಅವರು ನಾಯಕತ್ವ ಬದಲಾವಣೆಯಾಗಬೇಕೆಂದು ಆಗ್ರಹಿಸಿದ್ದರು. ನಾಯಕತ್ವ ಬದಲಾವಣೆ ಆಗ್ರಹ ಶ್ರೀನಿವಾಸ ಪ್ರಸಾದ್ ಅವರದ್ದಾಗಿತ್ತೇ ವಿನಃ ನಾನು ಎಂದಿಗೂ ನಾಯಕತ್ವ ಬದಲಾಗಬೇಕೆಂದು ಆಗ್ರಹಿಸಿರಲಿಲ್ಲ. ಇಂದು ನಡೆದ ಮಾತುಕತೆ ವೇಳೆ ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಚರ್ಚೆಯಾಗಿಲ್ಲ. ನನ್ನ ಹೋರಾಟವೇನಿದ್ದರೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಅಲ್ಪಸಂಖ್ಯಾತ ಸಮುದಾಯದ ನ್ಯಾಯಕ್ಕಾಗಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!

Nepal floods: ನೇಪಾಳ ಪ್ರವಾಹದ ಭೀಕರತೆ, 150 ಕಿ.ಮೀ ದೂರದ ಉತ್ತರ ಪ್ರದೇಶಕ್ಕೆ ಕೊಚ್ಚಿಕೊಂಡು ಬಂದ ಶವಗಳು!

Nepal Floods: ‘ಸಾವಿನ ಸಂಖ್ಯೆ ಊಹೆಗೂ ನಿಲುಕದಷ್ಟು ಏರಬಹುದು’; ಚೀನಾ ನಡೆ ಕುರಿತು ನೇಪಾಳ ಮಾಜಿ ಸಚಿವರ ಅನುಮಾನ!

RSS ಪಥಸಂಚಲನದಲ್ಲಿ ಭಾಗಿ: ಯಾದಗಿರಿಯ ಇಬ್ಬರು ಸರ್ಕಾರಿ ಶಿಕ್ಷಕರ ಅಮಾನತು

ಮಣಿಪುರದಲ್ಲಿ ಉಗ್ರರ ಅಟ್ಟಹಾಸ: ನಾಲ್ವರ ಸಾವು, ಒಬ್ಬ ನಾಪತ್ತೆ