ವೈ.ಎಸ್.ವಿ ದತ್ತ 
ರಾಜಕೀಯ

ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆಗೆ ಐಡಿಯಾ ಕೊಟ್ಟ ಭೂಪ ಯಾರು? ದತ್ತ ಪ್ರಶ್ನೆ

18 ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶದ ಎಳೆ ಹಿಡಿದುಕೊಂಡು ಲೋಕಾಯುಕ್ತ ಮುಚ್ಚಿಹಾಕಲು ನಿಮಗೆ ಐಡಿಯಾ ಕೊಟ್ಟ ಭೂಪ ಯಾರು? ಲೋಕಾಯುಕ್ತ ...

ಬೆಂಗಳೂರು: 18 ವರ್ಷಗಳ ಹಿಂದಿನ ನ್ಯಾಯಾಲಯದ ಆದೇಶದ ಎಳೆ ಹಿಡಿದುಕೊಂಡು ಲೋಕಾಯುಕ್ತ ಮುಚ್ಚಿಹಾಕಲು ನಿಮಗೆ ಐಡಿಯಾ ಕೊಟ್ಟ ಭೂಪ ಯಾರು? ಲೋಕಾಯುಕ್ತ ವ್ಯವಸ್ಥೆ ಕುರಿತು ದಿನಗಟ್ಟಲೇ ಚರ್ಚೆ ನಡೆದಾಗಲೂ ಪ್ರಸ್ತಾಪವಾಗದ ಈ ಆಲೋಚನೆ ದಿಢೀರ್ ಜಾರಿ ಹಿಂದೆ ಯಾವ ಸದುದ್ದೇಶವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಶಾಸಕ ವೈಎಸ್​ವಿ ದತ್ತ ಪ್ರಶ್ನಿಸಿದ್ದಾರೆ.

ಈ ಸಂಸ್ಥೆ ಬಗ್ಗೆ ಸದಾ ವಿರುದ್ದವಾಗಿರುವ ಅಧಿಕಾರಶಾಹಿ ತೊಡಕಿನ ಮಧ್ಯೆಯೂ ರಾಮಕೃಷ್ಣ ಹೆಗಡೆ ಕಾಲದಲ್ಲಿ ಸಂಸ್ಥೆ ಜೀವ ತಳೆಯಿತು. ಆ ಸಂದರ್ಭದ ಸರ್ಕಾರದಲ್ಲಿ ನೀವೂ ಇದ್ದಿರಿ. ಲೋಹಿಯಾ ವಾದಿಗಳಾದ ನೀವು ಶಕ್ತಿ ಇದ್ದರೆ ಸುಧಾರಣೆ ಚಕ್ರವನ್ನು ಮುಂದೆಳೆಯಬೇಕು ಎಂದು ಕಿವಿಮಾತು ಹೇಳಿದರು.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಸಹಕಾರಕ್ಕೆ ಬೇಸತ್ತು ನ್ಯಾ.ಸಂತೋಷ್ ಹೆಗ್ಡೆ ರಾಜೀನಾಮೆ ನೀಡಿದ್ದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಡಿದ್ದ ಮಾತುಗಳನ್ನು ಪುನರುಚ್ಚರಿಸಿದ ದತ್ತ, ಈಗ ಸಿಎಂ ಆಗಿ ಎಸಿಬಿ ರಚನೆ ಮಾಡಿರುವುದು ನಿಜಕ್ಕೂ ಗೌರವ ತರುವುದಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT