ದೇವೇಗೌಡ 
ರಾಜಕೀಯ

ಯಾರಿಂದಲೂ ನನ್ನ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ: ಎಚ್.ಡಿ ದೇವೇಗೌಡ

ನಾನಿರುವ ತನಕ ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬ ಒಡೆಯೋದಕ್ಕೆ ಬಿಡಲ್ಲ. ಪಕ್ಷದಲ್ಲೂ ನನ್ನದೇ ನಿರ್ಣಯ ಅಂತಿಮ' ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ..

ಬೆಂಗಳೂರು: ನಾನಿರುವ ತನಕ ರಾಜಕೀಯ ಕಾರಣಕ್ಕೆ ನಮ್ಮ ಕುಟುಂಬ ಒಡೆಯೋದಕ್ಕೆ ಬಿಡಲ್ಲ. ಪಕ್ಷದಲ್ಲೂ ನನ್ನದೇ ನಿರ್ಣಯ ಅಂತಿಮ' ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. 
ಕೆಂಗೇರಿ ಬಳಿಯ ಎಸ್‌ಡಿಎಂ ಆಯುರ್ವೇದ ಕೇಂದ್ರದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿರುವ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಚ್‌.ಡಿ.ರೇವಣ್ಣ ನಾನು ಹಾಕಿದ ಗೆರೆ ದಾಟುವುದಿಲ್ಲ. ರೇವಣ್ಣ ಎಂದೂ ತಂದೆಗೆ ವಿರುದ್ಧವಾಗಿ ಹೋಗಲ್ಲ, ನನಗಾಗಿ ಏನು ಬೇಕಾದರೂ ಮಾಡಲು ಅವನು ಸಿದ್ಧ ಎಂದು ತಿಳಿಸಿದರು.
ಕುಮಾರ ಸ್ವಾಮಿ ಮತ್ತು ರೇವಣ್ಣ ನಡುವೆ ಯಾವುದೇ ಮನಸ್ತಾಪವಿಲ್ಲ,  ಅವರಿಬ್ಬರು ಒಳ್ಳೆಯ ಸಹೋದರರು,ಇಬ್ಬರ ನಡುವೆ ಉತ್ತಮ ಸಂಬಂಧವಿದೆ ಎಂದು ದೇವೇಗೌಡ ಸಮರ್ಥಿಸಿಕೊಂಡಿದ್ದಾರೆ. 
ಎಂ ಜತೆ ಒಪ್ಪಂದ ಮಾಡಿಕೊಂಡಿಲ್ಲ ಎಚ್‌.ಡಿ.ರೇವಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಒಪ್ಪಂದ ಮಾಡಿಕೊಂಡಿಲ್ಲ. ನನ್ನ ಮಾತು ಮೀರಿ ಆವನು ಏನೂ ಮಾಡುವುದಿಲ್ಲ. ನನ್ನ ಮನೆಯಲ್ಲಿ ನನ್ನ ಮಾತೇ ಅಂತಿಮ ಎಂದು ಹೇಳಿದ್ದಾರೆ.
ನಮ್ಮ ಪಕ್ಷದಲ್ಲೇ ಇರುವವರು ನಮ್ಮ ಕುಟುಂಬದಲ್ಲಿ ವೈಮನಸ್ಯ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅದಕ್ಕೆ ನನ್ನ ಪ್ರಾಣ ಇರುವವರೆಗೂ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
ಮುಲಾಯಂ ಸಿಂಗ್ ಯಾದವ್  ಕುಟುಂಬದಂತೆ ನಮ್ಮ ಕುಟುಂಬ ಆಗಲು ಬಿಡುವುದಿಲ್ಲ ಎಂದು ಹೇಳಿದ ಅವರು, ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದ್ದಾರೆ.
ಹಿಂದೊಮ್ಮೆ ಹೊಳೆನರಸಿಪುರದಲ್ಲಿ ನನ್ನ ಪತ್ನಿ ಸ್ಪರ್ಧೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದರು. ಕೆ.ಆರ್‌. ಪೇಟೆಯಲ್ಲಿ ಮಗಳ ಸ್ಪರ್ಧೆಗೆ ಒತ್ತಾಯಿಸಿದ್ದರು. ನಾನು ಒಪ್ಪಿರಲಿಲ್ಲ. ಈಗಲೂ ಕುಟುಂಬದಲ್ಲಿ ಏನೇ ನಿರ್ಧಾರ ಮಾಡಬೇಕಾದರೂ ನನ್ನದೇ ಅಂತಿಮ ತೀರ್ಮಾನ. ಈಗಲೂ ರೇವಣ್ಣ ಮತ್ತು ಕುಮಾರಸ್ವಾಮಿ ನನ್ನ ಮಾತು ಮೀರಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT