ಆನಂದ್ ಸಿಂಗ್ 
ರಾಜಕೀಯ

ದುಬಾರಿ ಕಾರಿಗಾಗಿ ಬೇಡಿಕೆ: ಶಾಸಕ ಆನಂದ್ ಸಿಂಗ್ ಚಳ್ಳೆಹಣ್ಣು ತಿನ್ನಿಸಿದ ಯುವಕರು!

ತಾನು ಕೇಂದ್ರ ಸಚಿವರ ಪುತ್ರನೆಂದು ಹೇಳಿಕೊಂಡು ಬಳ್ಳಾರಿಯ ವಿಜಯ ನಗರ ಶಾಸಕ ಆನಂದ್ ಸಿಂಗ್ ಬಳಿ ದುಬಾರಿ ಕಾರಿಗಾಗಿ ಬೇಡಿಕೆಯಿಟ್ಟಿದ್ದ...

ಬಳ್ಳಾರಿ: ತಾನು ಕೇಂದ್ರ ಸಚಿವರ ಪುತ್ರನೆಂದು ಹೇಳಿಕೊಂಡು ಬಳ್ಳಾರಿಯ ವಿಜಯ ನಗರ ಶಾಸಕ ಆನಂದ್ ಸಿಂಗ್ ಬಳಿ ದುಬಾರಿ ಕಾರಿಗಾಗಿ ಬೇಡಿಕೆಯಿಟ್ಟಿದ್ದ ಆಂಧ್ರಪ್ರದೇಶ ಮೂಲದ ಆರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯನಗರ ಶಾಸಕ ಆನಂದ್ ಸಿಂಗ್ ದೂರಿನ ಮೇರೆಗೆ ಕೇಂದ್ರ ಸಚಿವ ಅಶೋಕ್  ಗಜಪತಿ ಬಾಬು ಅವರ ಪುತ್ರನೆಂದು ಹೇಳಿಕೊಂಡಿದ್ದ  ರಾಜ್ ವೀರ್ ಬಹದ್ದೂರ್ ಮತ್ತು ಆತನ ಐವರು ಸ್ನೇಹಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ಮಗನೆಂದು ಹೇಳಿಕೊಂಡು ಶಾಸಕ ಆನಂದ್ ಸಿಂಗ್ ಅವರಿಗೆ ಕರೆ ಮಾಡಿ, ತಾನು ಹಂಪಿ ನೋಡಲು ಬರುತ್ತಿದ್ದು, ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಹೇಳಿದ್ದ, ಅದರಂತೆ ಶಾಸಕರು ಆತನಿಗಾಗಿ  ಐಷಾರಾಮಿ ರೇಂಜ್ ರೋವರ್ ಎಸ್ ಯುವಿ ಕಾರನ್ನು ಪ್ರವಾಸಕ್ಕಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹಂಪಿಯಿಂದ ವಾಪಾಸಾದ ನಂತರ ರಾಜ್ ವೀರ್ ಬಹದ್ದೂರ್ ಕಾರನ್ನು ತನಗೆ ಉಡುಗೊರೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ, ಇದರಿಂದ ಅನುಮಾನಗೊಂಡ ಆನಂದ್ ಸಿಂಗ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಇದಕ್ಕೂ ಮೊದಲು ಆತನ ಸಿಂಧನೂರು ಶಾಸಕ ಹಂಪನಗೌಡ ಬರದಾಳಿ ಅವರ ಬಳಿ ತೆರಳಿ ತಾನು ಆಂಧ್ರಪ್ರದೇಶ ಉಪಮುಖ್ಯಮಂತ್ರಿಗಳ ಮದನೆಂದು ಪರಿಚಯಿಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಭೂಮಿ ಖರೀದಿಗಾಗಿ ಸಿಂಧನೂರಿಗೆ ಆಗಮಿಸುತ್ತಿದ್ದು, ತನಗೆ ಹಂಪಿ ನೋಡುವ ಆಸೆಯಿದ್ದು ಅದಕ್ಕಾಗಿ ವ್ಯವಸ್ಥೆ ಮಾಡುವಂತೆ ಹೇಳಿದ್ದಾನೆ. ಹಂಪನಗೌಡ ಬರದಾಳಿ ಆನಂದ್ ಸಿಂಗ್ ಅವರ ಸೋದರಳಿಯನಿಗೆ ಕರೆ ಮಾಡಿ  ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪುತ್ರಹೊಸಪೇಟೆಗೆ ಆಗಮಿಸುತ್ತಿದ್ದು, ಅವರ ಪ್ರವಾಸಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ಒಟ್ಟು ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಶಾಸಕರಿಗೆ ಬೆದರಿಕೆ
ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಅವರನ್ನು ನಿಂದಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಅಕ್ಟೋಬರ್ 17 ರಂದು ಶಾಸಕರ ಮನೆಗೆ ತಾನು ಕೆ.ಆರ್ ನಗರದ ಅಂಕನಹಳ್ಳಿ ಗ್ರಾಮದವನೆಂದು ಹೇಳಿಕೊಂಡು ಬಂದ ವ್ಯಕ್ತಿಯೊಬ್ಬ ಶಾಸಕರನ್ನು ಅವ್ಯಾಚ್ಯ ಪದಗಳಿಂದ ನಿಂದಿಸಿದ್ದಾನೆ ಎಂದು ಮಹೇಶ್ ಮನೆಯಲ್ಲಿ ಕೆಲಸ ಮಾಡುವ ಅವಿನಾಶ್ ಎಂಬುವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT