ಕರ್ನಾಟಕ ಚುನಾವಣೆ: ಆನ್ ಲೈನ್ ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆ ಚುನಾವಣಾ ಆಯೋಗದಿಂದ ವಿದ್ಯಾರ್ಥಿಗಳ ನಿಯೋಜನೆ 
ರಾಜಕೀಯ

ಆನ್ ಲೈನ್ ನೀತಿ ಸಂಹಿತೆ ಉಲ್ಲಂಘನೆ ಪತ್ತೆಗೆ ಚುನಾವಣಾ ಆಯೋಗದಿಂದ ವಿದ್ಯಾರ್ಥಿಗಳ ನಿಯೋಜನೆ

ಸಾಮಾಜಿಕ ಜಾಲತಾಣ, ಆನ್ ಲೈನ್ ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆಸುತ್ತಿರುವವರ ಮೇಲೆ ಕಣ್ಣಿಡಲು ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು...

ಬೆಂಗಳೂರು: ಸಾಮಾಜಿಕ ಜಾಲತಾಣ, ಆನ್ ಲೈನ್ ಬಳಸಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ನಡೆಸುತ್ತಿರುವವರ ಮೇಲೆ ಕಣ್ಣಿಡಲು ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಚುನಾವಣಾ ಆಯೋಗ ತೀರ್ಮಾನಿಸಿದೆ.
ಈ ಉದ್ದೇಶಕ್ಕಾಗಿ ಆಯೋಗವು ವಿವಿಧ ವೆಬ್ ಸೈಟ್ ಗಳಿಗೆ ವೆಬ್ ಕ್ರಾಲರ್ಗಳನ್ನು ಅಳವಡಿಸಿದೆ. ."ನಾವೀಗಾಗಲೇ ವಿವಿಧ ರಾಜಕೀಯ ಪಕ್ಷಗಳು ಜಾಲತಾಣದಲ್ಲಿ ನಡೆಸುತ್ತಿರುವ ಚಟುವಟಿಕೆಗಳನ್ನು ಪರಿಶೀಲಿಸಲು 10-15 ಜನರನ್ನು ನೇಮಕ ಮಾಡಿದ್ದೇವೆ. ಅಲ್ಲದೆ ನೀತಿ ಸಂಹಿತೆ ಉಲ್ಲಂಘನೆ ಮಾಡದಂತೆ ತಡೆಯಲು ನಾವು 10-15 ಕಾಲೇಜು ವಿದ್ಯಾರ್ಥಿಗಳನ್ನು ಇಂಟರ್ನಿಗಳಾಗಿಯೂ  ನೇಮಕ ಮಾಡಲಾಗಿದೆ." ಎಕ್ಸ್ ಪ್ರೆಸ್ ಜತೆ ಮಾತನಾಡಿದ ಜಂಟಿ ಮುಖ್ಯ ಚುನಾವಣಾ ಅಧಿಕಾರಿ,ಸೂರ್ಯ ಸೇನ್ ಎ ವಿ, ಹೇಳಿದ್ದಾರೆ.
ಈ ಕಾರ್ಯದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಎಂಜಿನಿಯರಿಂಗ್, ಕಾನೂನು ಮತ್ತು ಪತ್ರಿಕೋದ್ಯಮದ ಕೋರ್ಸ್ ಮಾಡುತ್ತಿದ್ದಾರೆ.ಇಂತಹಾ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ ಆಯೋಗ ನೀತಿ ಸಂಹಿತೆಯನ್ನು ಘೋಷಿಸುವುದಕ್ಕೆ ಒಂದು ತಿಂಗಳು ಮುನ್ನ ಅವರಿಗೆ ತರಬೇತಿ ನೀಡಿದೆ ಎಂದು ಅವರು ಹೇಳಿದರು. ಅಲ್ಲದೆ ಈ ಪರೀಕ್ಷಾ ಕೆಲಸದಲ್ಲಿ ನಿರತರಾದ ವಿದ್ಯಾರ್ಥಿಗಳು ಮನೆ, ವಸತಿ ನಿಲಯಗಳಿಂದಲೇ ಕೆಲಸ ಮಾಡುವವರಿದ್ದು ಅವರಾರೂ ಕೇಂದ್ರ ಕಛೇರಿಗೆ ಬಂದು ಕಾರ್ಯನಿರ್ವಹಿಸುವುದಿಲ್ಲ.
ಬೆಂಗಳೂರು ಕೇಂದ್ರ ಕಛೇರಿಯನ್ನು ಹೊರತುಪಡಿಸಿ ಇತರೆ ಜಿಲ್ಲಾ ಕೇಂದ್ರಗಳಲಿಯೂ ತಂಡಗಳ ನೇಮಕವಾಗಲಿದೆ. ಈ ತಂಡಗಳಿಗೆ ಸಹಾಯ ಮಾಡಲು ಕೆಲ ವಿಶೇಷ ತರಬೇತುದಾರರಿರಲಿದ್ದಾರೆ.
ಜೇಡಗಳ ಬಳಕೆ
ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳಿಂದ ಆನ್ ಲೈನ್ ನಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡುವುದನ್ನು ಪತ್ತೆ ಮಾಡಲಿಕ್ಕಾಗಿ ಇಸಿ ಜೇಡಗಳು ಅಥವಾ ವೆಬ್ ಕ್ರಾಲರ್ ಗಳನ್ನು ಬಳಕೆಮಾಡಲಾಗುತ್ತದೆ. ಕ್ರಾಲರ್ ಗಳು  ವೆಬ್ ಪುಟವನ್ನು ಬ್ರೌಸ್ ಮಾಡಲು ವಿನ್ಯಾಸಗೊಳಿಸಲಾದ ಕಂಪ್ಯೂಟರ್ ಪ್ರೊಗ್ರಾಮ್ ಗಳಾಗಿವೆ. ಸಾಮಾನ್ಯವಾಗಿ ವೆಬ್ ಪುಟಗಳನ್ನು ಅನುಕ್ರಮಣಿಕೆ (ಇಂಡೆಕ್ಸಿಂಗ್) ಮಾಡಲು ಬಳಸಲಾಗುವುದು. ಇದನ್ನು ಸದ್ಯ ನೀತಿ ಸಂಹಿತೆ ಉಲ್ಲಂಘನೆಯನ್ನು ಪರೀಕ್ಷಿಸಲು ಬಳಕೆ ಮಾಡುವುದಕ್ಕೆ ಯೋಜಿಸಲಾಗಿದೆ ಎಂದು ಸೂರ್ಯ ಸೇನ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT