50,000 ರೂಪಾಯಿ ಖರ್ಚು ಮಾಡಿ ಶೌಚಾಲಯವನ್ನು ಬಳಸುವ ರೀತಿ ಮಾಡಿದ ಗಂಗಪ್ಪ ತಲ್ವರೆ 
ರಾಜಕೀಯ

ಶೌಚಾಲಯವಿದ್ದರೂ ಬಳಸಲಾಗದ ಪರಿಸ್ಥಿತಿ: ಇದು ಅಫ್ಜಲ್ ಪುರದ ಕಥೆ

ರಾಜ್ಯ ಹೆದ್ದಾರಿಯಲ್ಲಿ ರಾಜು ಪಾಟೀಲ್ ಅವರ ಟೀ ಅಂಗಡಿಯಿದೆ. ಅಫ್ಜಲ್ ಪುರದ ...

ಕಲಬುರಗಿ: ರಾಜ್ಯ ಹೆದ್ದಾರಿಯಲ್ಲಿ ರಾಜು ಪಾಟೀಲ್ ಅವರ ಟೀ ಅಂಗಡಿಯಿದೆ. ಅಫ್ಜಲ್ ಪುರದ ಡಿಕ್ ಸಂಘ ಬಿ ಗ್ರಾಮದ ಪ್ರವೇಶದಲ್ಲಿರುವ ಈ ಟೀ ಅಂಗಡಿಯಲ್ಲಿ ಸಾಯಂಕಾಲದ ಹೊತ್ತು ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟುಸೇರಿ ರಾಜಕೀಯ ವಿದ್ಯಮಾನಗಳ ಕುರಿತು ಮಾತನಾಡುತ್ತಾರೆ.

ಇಲ್ಲೊಂದು ಶಾಲೆಯಿದೆ, ಆಸ್ಪತ್ರೆಯಿದೆ, ನೀರಿನ ಸೌಕರ್ಯವೂ ಇದೆ. ಆದರೆ ಶೌಚಾಲಯದ ಸೌಲಭ್ಯದ ಅಗತ್ಯವಿದೆ ಎನ್ನುತ್ತಾರೆ ನಿವಾಸಿಗಳು. ಗ್ರಾಮ ಪಂಚಾಯತ್ ವತಿಯಿಂದ ಇರುವ ಶೌಚಾಲಯಗಳ ತೊಟ್ಟಿ ತುಂಬಾ ಚಿಕ್ಕದಾಗಿದೆ. ಹೀಗಾಗಿ ಶೌಚಾಲಯಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿ ರಾಜು. ಗ್ರಾಮದಲ್ಲಿ ಕಸಕಡ್ಡಿಗಳನ್ನು ಹೋಗಲಾಡಿಸಲು ಒಳಚರಂಡಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ. ಮಹಿಳೆಯರು ಬಹಿರ್ದೆಸೆಗೆ ಬಯಲಿಗೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಅವರು.

1985ರಿಂದ ಇಲ್ಲಿಯವರೆಗೆ ಏಳು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಸಕ ಮಲ್ಲಿಕಯ್ಯ ವೆಂಕಯ್ಯ ಗುತ್ತೇದಾರ್ ಆರು ಬಾರಿ ಗೆದ್ದಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದರಿಂದ ಪಕ್ಷ ತ್ಯಜಿಸಿದ್ದರು. ನಂತರ ಮಲ್ಲಿಕಾರ್ಜುನ ಖರ್ಗೆಯವರ ಪುತ್ರ ಪ್ರಿಯಾಂಕ್ ಖರ್ಗೆಯವರಿಗೆ ಐಟಿ/ಬಿಟಿ ಖಾತೆ ನೀಡಲಾಯಿತು. ಮೇ 12ರ ಚುನಾವಣೆಗೆ ಮಲ್ಲಿಕಯ್ಯ ಗುತ್ತೇದಾರ್ ಅವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಿದ್ದು ಬಿಜೆಪಿ ನಾಯಕ ಎಂ.ವೈ.ಪಾಟೀಲ್ ಕಾಂಗ್ರೆಸ್ ಗೆ ವಲಸೆ ಹೋಗಿದ್ದಾರೆ.

ಇಲ್ಲಿನ ಶೌಚಾಲಯಗಳನ್ನು ಬಳಕೆ ಮಾಡಲಾಗಿರುವುದು ಗ್ರಾಮಸ್ಥರ ಅತಿದೊಡ್ಡ ಸಮಸ್ಯೆಯಾಗಿದೆ. ಸೊಚರ ಸಮುದಾಯ ಆರೋಗ್ಯ ಅಭಿಯಾನದಲ್ಲಿದಲ್ಲಿ ಕೆಲಸ ಮಾಡುತ್ತಿರುವ ಪ್ರಹ್ಲಾದ್ ಹೇಳುವ ಪ್ರಕಾರ, ಜೇನಿನ ಗೂಡಿನಂತೆ ಶೌಚಾಲಯಗಳನ್ನು ವಿನ್ಯಾಸಗೊಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT