ಹ್ಯಾರಿಸ್ ಮತ್ತು ವಸುದೇವ ಮೂರ್ತಿ 
ರಾಜಕೀಯ

ಪುತ್ರನ ಗೂಂಡಾಗಿರಿ: ಎಲ್ಲಾ ಮರೆತು ಹ್ಯಾರಿಸ್ ಗೆ ಒಲಿಯುವನೇ ಶಾಂತಿನಗರದ ಮತದಾರ?

ಸಿಲಿಕಾನ್ ಸಿಟಿಯ ಪ್ರಮುಖ ವಿಧಾನ ಸಭೆ ಕ್ಷೇತ್ರಗಳಲ್ಲಿ ಹೈಟೆಕ್ ಪ್ರದೇಶಗಳ ಆಗರ ಎಂದೇ ಶಾಂತಿನಗರ ಪ್ರಸಿದ್ದವಾಗಿದೆ...

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರಮುಖ ವಿಧಾನ ಸಭೆ ಕ್ಷೇತ್ರಗಳಲ್ಲಿ ಹೈಟೆಕ್ ಪ್ರದೇಶಗಳ ಆಗರ ಎಂದೇ ಶಾಂತಿನಗರ ಪ್ರಸಿದ್ದವಾಗಿದೆ.
ಮಗ ಮಾಡಿದ ತಪ್ಪಿಗೆ ತಂದೆ ಹ್ಯಾರಿಸ್ ಸೇರಿ ಕಾಂಗ್ರೆಸ್ ಪಕ್ಷವೇ ಮುಜುಗರ ಅನುಭವಿಸಬೇಕಾಯಿತು. ಈ ಘಟನೆಯಿಂದ ಟಿಕೆಟ್ ತಪ್ಪುವ ಭೀತಿಯಲ್ಲಿದ್ದ ಹ್ಯಾರಿಸ್ ಗೆ ಹಲವು ಡ್ರಾಮಾಗಳ ನಡುವೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಎರಡು ಅವಧಿ ಗೆದ್ದಿರುವ ಅವರು ಹ್ಯಾಟ್ರಿಕ್‌ಗಾಗಿ ಬೆವರು ಸುರಿಸತೊಡಗಿದ್ದಾರೆ. ಆದರೆ ಹ್ಯಾರಿಸ್ ಪುತ್ರನ ಪ್ರಕರಣ ವಿರೋಧ ಪಕ್ಷಗಳಿಗೆ ಆಹಾರವಾಗಿ ಮಾರ್ಪಟ್ಟಿದೆ.
ಹ್ಯಾರಿಸ್ ವಿರುದ್ಧ ಆಡಳಿತ ವಿರೋಧಿ ಅಲೆಯಿದೆ, ಹ್ಯಾರಿಸ್ ಕೇವಲ ಶ್ರೀಮಂತರು ವಾಸಿಸುವ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಗಮನ ನೀಡಿದ್ದಾರೆ ಎಂದು ಆರೋಪಿಸಲಾಗಿದೆ,. ಇದರ ಜೊತೆಗೆ ಕಸ ಮತ್ತು ಚರಂಡಿ ಸಮಸ್ಯೆಗೆ ಅಂತ್ಯ ದೊರೆತಿಲ್ಲ. 
2013 ರಲ್ಲಿ ಜೆಡಿಎಸ್ ನಿಂದ ಸ್ಪರ್ದಿಸಿದ್ದ ಕೆ, ವಾಸುದೇವ ಮೂರ್ತಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, 2013 ರಲ್ಲಿ ಕಣಕ್ಕಿಳಿದಿದ್ದ ವಾಸುದೇವ ಮೂರ್ತಿ 20 ಸಾವಿರ ಮತಗಳಿಂದ ಸೋತಿದ್ದರು. ಈ ಬಾರಿ ಹ್ಯಾರಿಸ್ ಮತ್ತು ವಾಸುದೇವ ಮೂರ್ತಿ ನಡುವೆ ನೇರ ಫೈಟ್ ನಡೆಯಲಿದೆ. ಜೆಡಿಎಸ್ ಎನ್.ಆರ್ ಶ್ರೀಧರ್ ರೆಡ್ಡಿ ಅವರನ್ನು ಸ್ಪರ್ಧೆ ಗಿಳಿಸಿದೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಯುಬಿ ಸಿಟಿ  ಹಾಗೂ ಚರ್ಚ್‌ಸ್ಟ್ರೀಟ್. ಇಂತಹ ಹೈಟೆಕ್ ಪ್ರದೇಶಗಳ ಆಗರ ‘ಶಾಂತಿನಗರ. 200 ಕ್ಕೂ ಹೆಚ್ಚು ಪಬ್, ದೇಶ-ವಿದೇಶಿ ಶೈಲಿಯ ಜೀವನಶೈಲಿ ಹೊಂದಿರುವ ಇಲ್ಲಿ ನಡೆಯುವ ಹೊಸ ವರ್ಷಾಚರಣೆ ರಾಜ್ಯದಲ್ಲೇ ಖ್ಯಾತಿ. ಈ ಪ್ರದೇಶ ಪಾಲಿಕೆಯ ಪ್ರಮುಖ ಆದಾಯದ ಮೂಲವೂ ಹೌದು. 175  ವರ್ಷ ಇತಿಹಾಸವುಳ್ಳ ಸೇಂಟ್ ಪ್ಯಾಟ್ರಿಕ್ ಚರ್ಚ್ ಸೇರಿ ಹತ್ತಾರು ಪ್ರಮುಖ ಚರ್ಚ್‌ಗಳು ಇಲ್ಲಿವೆ. 
ದೀಪದ ಬುಡ ಕತ್ತಲು ಎಂಬಂತೆ ಹೈಟೆಕ್ ಪ್ರದೇಶಗಳಿರುವ ಈ ಕ್ಷೇತ್ರದಲ್ಲಿ ಕಪ್ಪು ಚುಕ್ಕೆಗಳಿಗೆ ಬರವಿಲ್ಲ. ನೀಲಸಂದ್ರ, ಆಸ್ಟಿನ್‌ಟೌನ್, ಈಜಿಪುರ ಸುತ್ತಮುತ್ತಲಿನ ಕೊಳಗೇರಿ ಗಳಸಮಸ್ಯೆಗಳು ಪರಿಹಾರ ಕಂಡಿಲ್ಲ. ಇಂತಹ ಕ್ಷೇತ್ರ ಇದೀಗ ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT