ರಾಜಕೀಯ

ಹೈದರಾಬಾದ್ ನಲ್ಲಿ ಚಿನ್ನ ಜೀಯರ್ ಸ್ವಾಮೀಜಿ ಭೇಟಿಯಾದ ಸಿಎಂ ಯಡಿಯೂರಪ್ಪ

Lingaraj Badiger
ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶುಕ್ರವಾರ ತೆಲಂಗಾಣದ ಪ್ರಸಿದ್ಧ ಚಿನ್ನ ಜೀಯರ್ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
ಪುತ್ರ ಬಿ ವೈ ವಿಜಯೇಂದ್ರ ಜೊತೆ ಹೈದರಾಬಾದ್ ನ ಶಂಶಾಬಾದ್​ಗೆ ತೆರಳಿ ಅಲ್ಲಿ ಚಿನ್ನ ಜೀಯರ್ ಸ್ವಾಮೀಜಿಯನ್ನು ಭೇಟಿ ಮಾಡಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಭೇಟಿ ನೀಡುತ್ತಿರುವ ಎರಡನೇ ಸ್ವಾಮೀಜಿ ಇವರಾಗಿದ್ದಾರೆ. ಇದಕ್ಕೂ ಮೊದಲು ಅವರು ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು.
ಮೇಲುಕೋಟೆಯಲ್ಲಿರುವ ಸ್ವಾಮೀಜಿಗಳ ಸಲಹೆ ಮೇರೆಗೆ ಯಡಿಯೂರಪ್ಪ ಅವರು ಚಿನ್ನ ಜೀಯರ್ ಸ್ವಾಮೀಜಿಯನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ಯಡಿಯೂರಪ್ಪ ಅವರು ಭದ್ರಾಚಲಂ​ನ ಸೀತಾರಾಮ ದೇವಸ್ಥಾನಕ್ಕೂ ಹೋಗಿ ಅಲ್ಲಿಯ ದೇವರ ದರ್ಶನ ಪಡೆದಿದ್ದಾರೆ.
ನಂತರ ಅವರು ನೇರವಾಗಿ ಬೆಂಗಳೂರಿಗೆ ಆಗಮಿಸಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
SCROLL FOR NEXT