ರಾಜಕೀಯ

ಸಂಪುಟ ವಿಸ್ತರಣೆಯಲ್ಲಿ ಸಿಲಿಕಾನ್ ಸಿಟಿಗೆ ಸಿಂಹಪಾಲು : ಮೇಯರ್ ಹುದ್ದೆ ಮೇಲೆ ಬಿಜೆಪಿ ಕಣ್ಣು!

Shilpa D

ಬೆಂಗಳೂರು: ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಸಂಪುಟ ಸೇರಿದ 17 ಶಾಸಕರ ಪೈಕಿ ನಾಲ್ವರು ಬೆಂಗಳೂರು ನಗರದ ಜನಪ್ರತಿನಿಧಿಗಳು ಎಂಬುದು ಗಮನಾರ್ಹ.ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಪುಟ ವಿಸ್ತರಣೆಯಲ್ಲಿ ಸಿಂಹಪಾಲು ಸಿಕ್ಕಿದೆ.

ಪದ್ಮನಾಭನಗರದ ಶಾಸಕ ಆರ್. ಅಶೋಕ, ರಾಜಾಜಿನಗರದ ಎಸ್. ಸುರೇಶ್ ಕುಮಾರ್, ಗೋವಿಂದರಾಜನಗರದ ವಿ. ಸೋಮಣ್ಣ ಹಾಗೂ ಮಲ್ಲೇಶ್ವರಂ ನ ಸಿಎನ್ ಅಶ್ವತ್ಥ ನಾರಾಯಣ ಪ್ರಮುಖರು, ಆರ್, ಅಶೋಕ್  ಮತ್ತು ಸುರೇಶ್ ಕುಮಾರ್ ಆರು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರೇ ವಿ. ಸೋಮಣ್ಣ 5 ಬಾರಿ ಅಶ್ವತ್ಥ ನಾರಾಯಣ ಮೂರು ಬಾರಿ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ 28 ವಿಧಾನ ಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 11 ರಲ್ಲಿ ಗೆಲುವು ಕಂಡಿದೆ. ಅದರಲ್ಲಿ ನಾಲ್ಕು ಮಂದಿ ಸಚಿವ ಸಂಪುಟ ಸೇರಿದ್ದಾರೆ. 

ಬಿಬಿಎಂಪಿ ಮೇಯರ್ ಚುನಾವಣೆಗೆ ಇನ್ನೂ ಕೆಲವೇ ವಾರಗಳು ಬಾಕಿ ಇದ್ದು,ಈ ಬಾರಿ ಮೇಯರ್ ಪಟ್ಟ ಬಿಜೆಪಿಗೆ ಸಿಗಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

SCROLL FOR NEXT