ರಾಜಕೀಯ

ಎರಡನೇ ತಲೆಮಾರಿಗೆ ಹೈಕಮಾಂಡ್  ಮಣೆ: ಬಿಜೆಪಿ ಹಿರಿಯ ನಾಯಕರ ದಿಗ್ಭ್ರಮೆ

Shilpa D

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಮುಂದಾಗಿರುವ ಬಿಜೆಪಿ ವರಿಷ್ಠರು ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ಕಟ್ಟಪ್ಪಣೆ ವಿಧಿಸಿದ್ದಾರೆ.

ಉಪಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಿರುವ ನಾಯಕರನ್ನು ನೋಡಿ ಬಿಜೆಪಿ ಹಿರಿಯ ನಾಯಕರೇ ದಂಗಾಗಿದ್ದಾರೆ, 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಕತ್ತಿ ಅವರಂತ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ.

ಆದರೆ ವಿಧಾನಸಭೆಯಲ್ಲಿ ಸೋತ ಲಕ್ಷ್ಮಣ ಸವದಿಯನ್ನು ಮಂತ್ರಿ ಮಾಡಿ ಉಪಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ,  ಸವದಿಗೆ ಈ ಹುದ್ದೆ ನೀಡಿರುವ ಹಿಂದಿನ ಮರ್ಮ ಏನು ಎಂಬುದು ಬಿಜೆಪಿ ನಾಯಕರಿಗೆ ತಿಳಿಯುತ್ತಿಲ್ಲ.

ಜಗದೀಶ್ ಶೆಟ್ಟರ್ ಹೊರತು ಪಡಿಸಿ, ಕೆ.ಎಸ್ ಈಶ್ವರಪ್ಪ, ಆರ್ ಅಶೋಕ್, ಸಿಟಿ ರವಿ ಮತ್ತು ಶ್ರೀರಾಮುಲು ತಮಗೆ ನೀಡಿರುವ ಖಾತೆ ಬಗ್ಗೆ ಅಸಮಾಧಾನ ಹೊಂದಿದ್ದಾರೆ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ,ಟಿ ರವಿ ಅವರಿಗೆ ಪ್ರವಾಸೋದ್ಯಮ ಖಆತೆ ನೀಡಿರುವುದು ಬೇಸರಕ್ಕೆ ಕಾರಣವಾಗಿದೆ.ಈ ಮೊದಲು ಉನ್ನತ ಸಚಿವರಾಗಿ ರವಿ ಕೆಲಸ ಮಾಡಿದ್ದರು.  ಆದರೆ ಸದ್ಯಕ್ಕೆ ಉನ್ನತ ಶಿಕ್ಷಣ ಖಾತೆಯನ್ನು ಡಾ. ಅಶ್ವತ್ಥ ನಾರಾಯಣ ಅವರಿಗೆ ನೀಡಲಾಗಿದೆ.

SCROLL FOR NEXT