ಕೆಬಿ ಕೋಳಿವಾಡ 
ರಾಜಕೀಯ

ಅನುಭವಿ ಮತ್ತು ಹೊಸಬರ ನಡುವಿನ ಯುದ್ಧಕ್ಕೆ ನಿರ್ಣಾಯಕವಾಗಲಿವೆ ಕುರುಬ ಮತಗಳು!

ಹಾವೇರಿ ಜಿಲ್ಲೆಯ  ರಾಣೆ ಬೆನ್ನೂರು ಉಪ ಚುನಾವಣೆ ಕಣ ರಂಗೇರುತ್ತಿದೆ, ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ವಿರುದ್ಧ ಬಿಜೆಪಿಯ ಅರುಣ್ ಕುಮಾರ್ ಗುಟ್ಟೂರ್  ಸ್ಪರ್ಧಿಸಿದ್ದಾರೆ.

ಹುಬ್ಬಳ್ಳಿ:  ಹಾವೇರಿ ಜಿಲ್ಲೆಯ  ರಾಣೆ ಬೆನ್ನೂರು ಉಪ ಚುನಾವಣೆ ಕಣ ರಂಗೇರುತ್ತಿದೆ, ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ ವಿರುದ್ಧ ಬಿಜೆಪಿಯ ಅರುಣ್ ಕುಮಾರ್ ಗುಟ್ಟೂರ್  ಸ್ಪರ್ಧಿಸಿದ್ದಾರೆ.

ಅನರ್ಹ ಶಾಸಕ ಆರ್.ಶಂಕರ್  ಅವರಿಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದ ಕಾರಣ ಮತದಾರರು ಅಸಮಾಧಾನ ವ್ಯಕ್ತ ಪಡಿಸಿದ್ದರು. 2018 ರ ವಿಧಾನಸಭೆ ಚುನಾವಣೆ ನಡೆದು 18 ತಿಂಗಳಲ್ಲೇ ಶಂಕರ್ ರಾಜಿನಾಮೆ ನೀಡಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಕೆಬಿ ಕೋಳಿವಾಡ  ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು 11ನೇ ಬಾರಿಗೆ ಚುನಾವಣೆ ಸ್ಪರ್ಧಿಸಿದ್ದಾರೆ.  ಮತ್ತೆ ಇದೇ ಕೊನೆಯ ಚುನಾವಣೆ ಎಂದು ಘೋಷಿಸಿದ್ದಾರೆ. ಅದರ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಇದಾಗಿದೆ,  ಕೋಳಿವಾಡ ಅವರಿಗೆ ಅಪಾರ ಅನುಭವವಾಗಿದೆ, ಗುತ್ತೂರು ಅವರಿಗೆ ಹೊಸಬರಾಗಿದ್ದಾರೆ.  ತಮ್ಮ ಹಿಂದಿನ ಕೆಲಸಗಳನ್ನು ನೋಡಿ ಜನ ತಮಗೆ ಮತ ಹಾಕಲಿದ್ದಾರೆ ಎಂದು ಕೋಳಿವಾಡ ಅವರ ಅಭಿಪ್ರಾಯವಾಗಿದೆ.

ರಾಣೆ ಬೆನ್ನೂರು ಕ್ಷೇತ್ರದಲ್ಲಿ ಜಾತಿ ರಾಜಕೀಯ ಪ್ರಮುಖವಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳು ಎಸ್ ಸಿ ಎಸ್ ಟಿ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿವೆ, ಲಿಂಗಾಯತರೇ ಅಧಿಕವಾಗಿರುವ ರಾಣೆ ಬೆನ್ನೂರು  ಕ್ಷೇತ್ರದಲ್ಲಿ 2 ನೇ ಸ್ಥಾನ ಹಿಂದುಳಿ ವರ್ಗಗಳದ್ದಾಗಿದೆ. ಆದರೆ ಕುರುಬ ಸಮುದಾಯದ ಅಂತಿಮ ನಿರ್ಧರವೇ ಇಲ್ಲಿ ಪ್ರಮುಖವಾದದ್ದು.

ಜೆಡಿಎಸ್ ಗೆ ಇಲ್ಲಿ ಅಸ್ತಿತ್ವವಿಲ್ಲ, ಲಿಂಗಾಯತ ಸಮುದಾಯದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಹಲಗೇರಿ ಅವರ ಜನಪ್ರಿಯತೆ ಮೇಲೆ ಮಾತ್ರ ಜೆಡಿಎಸ್ ವೋಟ್ ಸಿಗಲಿದೆ.

ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಈ ತಕ್ಷೇತ್ರದ ಜನ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ,  ಆಡಳಿತಾರೂಡ ಪಕ್ಷ ಎಲ್ಲಾ ಅವಶ್ಯಕತೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಕೋಳಿವಾಡ ಎಮೋಷನಲ್ ಕಾಾರ್ಜ್ ಪ್ಲೇ ಮಾಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

SCROLL FOR NEXT