ರಾಜಕೀಯ

ಕೆಲವೆಡೆ ಕೈಕೊಟ್ಟ ವಿದ್ಯುನ್ಮಾನ ಮತಯಂತ್ರ: ಹಕ್ಕು ಚಲಾವಣೆ ವಿಳಂಬ

Manjula VN

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ಪ್ರಗತಿಯಲ್ಲಿದ್ದು, ಮತದಾನ ಶಾಂತಿಯುತವಾಗಿ ನಡೆಯುತ್ತಿದೆ. ಆದರೆ ಕೆಲವೆಡೆ ವಿದ್ಯುನ್ಮಾನ ಮತ ಯಂತ್ರ ಕೈಕೊಟ್ಟಿರುವ ಘಟನೆ ನಡೆದಿದೆ. ಇದರಿಂದ ಮತದಾನ ಸ್ವಲ್ಪ ಹೊತ್ತು ವಿಳಂಬವಾಗಿತ್ತು.

ಹೊಸಕೋಟೆಯ ಭುವನಹಳ್ಳಿ ಗ್ರಾಮದ ಮತಗಟ್ಟೆ ಸಂಖ್ಯೆ 49ರ ವಿದ್ಯುನ್ಮಾನ ಮತಯಂತ್ರದಲ್ಲಿ ದೋಷ ಕಂಡುಬಂದಿತ್ತು. ಇದರಿಂದ ಒಂದು ಗಂಟೆ ಕಾಲ ಮತದಾನ ಸ್ಥಗತಿಗೊಂಡಿತ್ತು. ಇದರಿಂದ ಮತದಾನಕ್ಕೆ ಬಂದ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ದೃಶ್ಯ ಕಂಡುಬಂತು. ಮಾತ್ರವಲ್ಲ ಸಾರ್ವಜನಿಕರು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಸ್ಥಳಕ್ಕೆ ಬಂದ ಅಧಿಕಾರಿಗಳು ಯಂತ್ರವನ್ನು ಸರಿಪಡಿಸಿದರು. ಬಳಿಕ ಮತದಾನ ಆರಂಭಗೊಂಡಿತು.

SCROLL FOR NEXT