ರಾಜಕೀಯ

ಉಪ ಚುನಾವಣೆಯಲ್ಲಿ ಜಯಬೇರಿ: 7 ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಅರ್ಪಿಸಿದ ಆನಂದ್ ಸಿಂಗ್

Lingaraj Badiger

ಹೊಸಪೇಟೆ: ಕಳೆದ ಡಿಸೆಂಬರ್ 5ರಂದು ನಡೆದ 15 ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ವಿಜಯನಗರ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅವರು ನಗರದ ಕೇರಿಯ ಏಳು ದೇವಸ್ಥಾನಗಳಿಗೆ ತಲಾ 9 ಕೆಜಿ ಬೆಳ್ಳಿ ಗಟ್ಟಿಗಳನ್ನು ಅರ್ಪಿಸಿದ್ದಾರೆ. 

ಆನಂದ್ ಸಿಂಗ್ ಅವರು, ತಳವಾರ ಕೇರಿಯ ದುರುಗಮ್ಮ ದೇವಿ ದೇವಸ್ಥಾನ,ಬಾಣದಕೇರಿ ನಿಜಲಿಂಗಮ್ಮ ದೇವಿ ದೇವಸ್ಥಾನ, ಚಿತ್ರಕೇರಿಯ ತಾಯಮ್ಮ ದೇವಸ್ಥಾನ, ಉಕ್ಕಡಕೇರಿಯ ಹುಲಿಗೆಮ್ಮ ಹಾಗೂ ಜಲದುರ್ಗಮ್ಮ ದೇವಿಯ ದೇವಸ್ಥಾನ ,ಮ್ಯಾಸಕೇರಿಯ ಹುಲಿಗಮ್ಮ ಕೊಂಗಮ್ಮ ದೇವಸ್ಥಾನ, ಹಾಗೂ ಕಲ್ಲಮ್ಮ ದೇವಿ ದೇವಸ್ಥಾನಕ್ಕೆ ತಲಾ ಒಂಬತ್ತು ಕೆಜಿ ಬೆಳ್ಳಿ ದೇಣಿಗೆ ನೀಡಿ ಹರಕೆ ಸಲ್ಲಿಸಿದ್ದಾರೆ.

ಫಲಿತಾಂಶ ಪ್ರಕಟಗೊಂಡ ನಂತರ ಆನಂದ್ ಸಿಂಗ್ ಅವರು ತಮ್ಮ ಬೆಂಬಲಿಗರೊಂದಿಗೆ ಪ್ರತಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ ಬೆಳ್ಳಿ ಅರ್ಪಿಸಿ, ವಿಶೇಷ ಪೂಜೆ ಮಾಡಿದರು.

SCROLL FOR NEXT