ರಾಜಕೀಯ

ನಾನು ಮತ್ತು ಸಿದ್ದರಾಮಯ್ಯ ವೈರಿಗಳಲ್ಲ: ಎಚ್. ವಿಶ್ವನಾಥ್

Vishwanath S

ಬೆಂಗಳೂರು: ನಾನು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೈರಿಗಳಲ್ಲ. ರಾಜಕಾರಣದಲ್ಲಿ ಕೆಲವೊಂದು ವ್ಯತ್ಯಾಸಗಳು ಆಗುತ್ತೇವೆ. ಸಿದ್ದರಾಮಯ್ಯ ಮತ್ತು ತಾವು ಪಾಕಿಸ್ತಾನ ಇಂಡಿಯಾ ಅಲ್ಲ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎರಡು ದೇಶಗಳ ಶತ್ರುಗಳು. ಶತೃತ್ವ ಅಂದರೆ ಪಾಕಿಸ್ತಾನ ಮತ್ತು ಇಂಡಿಯಾದ್ದು, ನಾನು ಮತ್ತು ಸಿದ್ದರಾಮಯ್ಯ ಇಂಡಿಯಾ ಪಾಕಿಸ್ತಾನವಲ್ಲ. ಮತ ರಾಜಕೀಯ ಬೇರೆ ಸ್ನೇಹವೇ ಬೇರೆ. ನನ್ನ ಹಾಗೂ ಸಿದ್ದರಾಮಯ್ಯನವರನ್ನಾ ಶತೃಗಳು ಅಂತಾ ಕರೆಯಬೇಡಿ ಎಂದು ಸುದ್ದಿಗಾರರಿಗೆ ಮನವಿ ಮಾಡಿದರು.

ಕಳೆದ ಬುಧವಾರ ಸಿದ್ದರಾಮಯ್ಯ ಅವರು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿದ್ದರು. ನಂತರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. 

SCROLL FOR NEXT