ರಾಜಕೀಯ

ಆನಂದ್ ಸಿಂಗ್ ಅವರಿಂದ ರಾಜಿನಾಮೆ ಪರ್ವ ಆರಂಭ: ಸರ್ಕಾರ ಬೀಳೋದು ಖಚಿತ; ಆರ್.ಅಶೋಕ್

Shilpa D
ಮೈಸೂರು: ಸರ್ಕಾರ ಬೀಳೋದು ಖಚಿತ, ಆದರೆ ಇದರಲ್ಲಿ ನಮ್ಮ ಪಾತ್ರವಿಲ್ಲ, ಇನ್ನೆರಡು ದಿನ ಕಾದು ನೋಡಿ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ದಂಡನಾಯಕರೇ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ, ಇದರಿಂದ ಜೆಡಿಎಸ್ ಪಕ್ಷಕ್ಕೆ ದಿಕ್ಕು- ದೆಸೆ ಇಲ್ಲದಂತಾಗಿದೆ, ಜೆಡಿಎಸ್ ಪಕ್ಷ ಸೂತ್ರ ಹರಿದ ಗಾಳಿಪಟದಂತೆ ಕಿತ್ತು ಹಾರಾಡಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ  ಮಧ್ಯಂತರ ಚುನಾವಣೆ ಬಂದರೆ ಅದಕ್ಕೆ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಎಂದು ಆರೋಪಿಸಿರುವ ಆರ್ ,ಅಶೋಕ್ ಮೈತ್ರಿ ಪಕ್ಷಗಳೇ ಸಮ್ಮಿಶ್ರ ಸರ್ಕಾರವನ್ನು ಅನಾಥ ಮಾಡುತ್ತವೆ ಎಂದು ವ್ಯಂಗ್ಯವಾಡಿದ್ದಾರೆ
SCROLL FOR NEXT