ರಾಜಕೀಯ

ಶಾಸಕ ಆನಂದ್ ಸಿಂಗ್ ರಾಜಿನಾಮೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದೇನು?

Shilpa D
ಬೆಂಗಳೂರು: ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಶಾಸಕರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ ಎಂಬ ಮಾಧ್ಯಮಗಳ ವರದಿಗಳಿಗೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ  ನೀಡಿದ್ದಾರೆ,
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ, ರಮೇಶ್ ಕುಮಾರ್ ನನಗೂ ,ಅದಕ್ಕೂ ಸಂಬಂಧವಿಲ್ಲ, ಕಾಂಗ್ರೆಸ್ ನವರಾಗಲಿ ಬಿಜೆಪಿಯವರಾಗಲಿ ಯಾರೇ ರಾಜಿನಾಮೆ ನೀಡಿದರೇ ನನಗೇನು ಸಂಬಂಧವಿಲ್ಲ,  ಆನಂದ್ ಸಿಂಗ್ ನನಗೆ ರಾಜಿನಾಮೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ರಾತ್ರಿಯಿಂದ ನಾನು ಮನೆಯಲ್ಲಿಯೇ ಇದ್ದೇನೆ, ಯಾರೂ ನನ್ನ ಬಳಿ ಬಂದಿಲ್ಲ, ರಾಜಿನಾಮೆ ಪತ್ರ ನೀಡಿಲ್ಲ, ಒಬ್ಬರಲ್ಲ, ಇಪ್ಪತ್ತು ಮಂದಿ ರಾಜಿನಾಮೆ ಕೊಟ್ಟರು ಸ್ವೀಕರಿಸುತ್ತೇನೆ, ಆನಂದ್ ಸಿಂಗ್ ರಾಜಿನಾಮೆ ಬಗ್ಗೆ ನನಗೇನು ತಿಳಿದಿಲ್ಲ  ಎಂದು ಪ್ರತಿಕ್ರಿಯಿಸಿದ್ದಾರೆ.
SCROLL FOR NEXT