ರಾಜಕೀಯ

ಅತೃಪ್ತ ಶಾಸಕರು ಕಾಂಗ್ರೆಸ್ ತೊರೆದು ಹೋಗುವುದಿಲ್ಲ ಎಂಬ ವಿಶ್ವಾಸ ನನಗಿದೆ: ಡಿ ಕೆ ಶಿವಕುಮಾರ್

Sumana Upadhyaya
ಬೆಂಗಳೂರು: ನಮ್ಮ ಶಾಸಕರ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದು ಹಲವು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದಾರೆ. ಹೀಗಾಗಿ ಪಕ್ಷ ತೊರೆಯುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಅತೃಪ್ತ ಶಾಸಕರು ತಮ್ಮ ಕ್ಷೇತ್ರದಲ್ಲಿ ಹುಲಿಯಂತೆ ಹೋರಾಡಿ ಕಷ್ಟಪಟ್ಟು ಗೆದ್ದುಬಂದವರು. ಹೀಗಾಗಿ ಏಕಾಏಕಿ ಈಗ ಪಕ್ಷ ತೊರೆಯಲು ಸಾಧ್ಯವೇ ಇಲ್ಲ. ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಕಾನೂನುಬದ್ಧವಾಗಿಯೇ ನಡೆದುಕೊಳ್ಳುತ್ತಾರೆ, ಕಾನೂನು ಸ್ಪಷ್ಟವಾಗಿದೆ. ವಿಶ್ವಾಸಮತಕ್ಕೆ ವಿರುದ್ಧವಾಗಿ ಮತ ಹಾಕಿದರೆ ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದರು.
ಅತೃಪ್ತ ಶಾಸಕರ ಬೇಡಿಕೆಗಳನ್ನು ಈಡೇರಿಸಲು ಪಕ್ಷ ಸಿದ್ಧವಿದೆ. ಸರ್ಕಾರವನ್ನು ಅವರು ಉಳಿಸುತ್ತಾರೆ ಎಂಬ ಸೂಚನೆ ನಮಗೆ ಸಿಕ್ಕಿದೆ ಎಂದು ಸಚಿವ ಡಿಕೆಶಿ ಹೇಳಿದರು.
SCROLL FOR NEXT