ರಾಜಕೀಯ

ಸದನದಲ್ಲಿ ಆಪರೇಷನ್ ಕಮಲದ ಗದ್ದಲ: ಶಾಸಕರ ಕುದುರೆ ವ್ಯಾಪಾರಕ್ಕೆ ಬಿಜೆಪಿಯಿಂದ ಕೋಟಿ ಕೋಟಿ ಹಣ!

Shilpa D
ಬೆಂಗಳೂರು: ಸದನದಲ್ಲಿ  ಮುಖ್ಯಮಂತ್ರಿಗಳ ಮಾತನಾಡುತ್ತಿರುವ ವೇಳೆಯಲ್ಲಿ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪವಾಯಿತು.
ಬಿಜೆಪಿ ಶಾಸಕರು ನಮ್ಮ ಮನೆಗೆ ಬಂದು 5 ಕೋಟಿ ರು ಹಣ ಇಟ್ಟು ಹೋಗಿದ್ದರು ಎಂದು ಶಾಸಕ ಶ್ರೀನಿವಾಸ ಗೌಡ ಆರೋಪಿಸಿದ್ದಾರೆ. ಬಿಜೆಪಿ ಶಾಸಕರಾದ ಅಶ್ವತ್ಥ ನಾರಾಯಣ, ಎಸ್ ಆರ್ ವಿಶ್ವನಾಥ್ ಹಾಗೂ ಮಾಜಿ ಶಾಸಕ ಸಿಪಿ ಯೋಗೇಶ್ವರ್ ನಮ್ಮ ಮನೆಗೆ ಬಂದು 5 ಕೋಟಿ ಹಣ ಇಟ್ಟರು, ಆದರೆ ನಾನು ಆ ರೀತಿಯಲ್ಲ ಎಂದು ಹೇಳಿ ಕಳುಹಿಸಿದೆ ಎಂದು ಮತ್ತೊಮ್ಮೆ ಆರೋಪಿಸಿದ್ದಾರೆ.
ಬಿಜೆಪಿಯಿಂದ ಆಪರೇಷನ್ ಕಮಲಕ್ಕೆ ನೂರಾರು ಕೋಟಿ ಖರ್ಚು ಮಾಡುತ್ತಿದೆ. ಒಬ್ಬೊಬ್ಬ ಶಾಸಕರಿಗೆ 30 ಕೋಟಿ ಆಫರ್ ಕೊಟ್ಟಿದ್ದಾರೆ  ಎಂದು ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.
ಇನ್ನೂ ಇದೇ ವೇಳೆ ಮಧ್ಯ ಪ್ರವೇಶಿಸಿದ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್, ಚುನಾವಣೆಯ ಸಾಲ ತೀರಿಸಲು ಎಚ್.ವಿಶ್ವನಾಥ ಬಿಜೆಪಿಗೆ ಹೋಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ತನಗೆ ಸಚಿವ ಸ್ಥಾನ ಬೇಡ ಎಂದು ಎಚ್.ವಿಶ್ವನಾಥ ಹೇಳಿದ್ದರು. ಬಿಜೆಪಿಯಿಂದ 26 ಕೋಟಿ ರೂಪಾಯಿ ಆಫರ್ ಬಂದಿರುವುದಾಗಿ ಹೇಳಿದ್ದರು ಎಂದು ಸಾರಾ ಮಹೇಶ್ ದೂರಿದ್ದಾರೆ.
SCROLL FOR NEXT