ರಾಜಕೀಯ

ಕಾಂಗ್ರೆಸ್ ಕುದುರೆ ವ್ಯಾಪಾರ ಆರೋಪ ವಿಲಕ್ಷಣ- ಆರ್. ಅಶೋಕ್

Nagaraja AB
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದೆ ಎಂದು ಆ ಪಕ್ಷದವರು ಮಾಡುತ್ತಿರುವ ಆರೋಪ ವಿಲಕ್ಷಣದಿಂದ ಕೂಡಿದೆ ಎಂದು ಬಿಜೆಪಿ ಹಿರಿಯ ಶಾಸಕ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸಭಾ ಚುನಾವಣೆ ಸಂದರ್ಭದಲ್ಲಿ ಅಡ್ಡ ಮತದಾನ ಮಾಡುವವರ ಸಿದ್ಧಾಂತ ಎಲ್ಲರಿಗೂ ಅಚ್ಚರಿಕೆ ತಂದಿದೆ. ಇದು ಯಾವ ರೀತಿಯ ನೈತಿಕತೆ ಎಂದು ಪ್ರಶ್ನಿಸಿದರು.
ಹಿಂದಿನ ಮೈತ್ರಿಗಳನ್ನು ಅಸ್ಥಿರಗೊಳಿಸಿದಾಗ ಅವರ ಸಿದ್ಧಾಂತಗಳು ಏಲ್ಲಿಗೆ ಹೋಗಿದ್ದವು. ಹೋಟೆಲ್ ಗಳ ಬಿಲ್  ಯಾರು ಪಾವತಿ ಮಾಡಿದರು. ವಿಮಾನದ ವೆಚ್ಚ ಭರಿಸಿದವರು ಯಾರು, ಇಲ್ಲಿಂದ ಅಲ್ಲಿಗೆ ಶಾಸಕರನ್ನು ಕರೆದುಕೊಂಡು ಹೋದವರು ಯಾರು ಎಂದು ಪ್ರಶ್ನಿಸಿದರು. ಇದಕ್ಕಿದ್ದಂತೆ ಈಗ ತತ್ವಗಳ ಬಗ್ಗೆ ಕಾಂಗ್ರೆಸ್ ಕಣ್ಣಿರುಡುತ್ತಿದೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸಮತ ನಿರ್ಣಯ ವಿಚಾರದಲ್ಲಿ ಸಭಾಧ್ಯಕ್ಷ ಕೆ. ಆರ್. ರಮೇಶ್ ಕುಮಾರ್ ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಆರ್. ಅಶೋಕ್ ತಿಳಿಸಿದರು.
SCROLL FOR NEXT