ರಾಜಕೀಯ

ಶಾಸಕರನ್ನು ಅನರ್ಹಗೊಳಿಸಿದ್ದಕ್ಕೆ ಬಿಜೆಪಿಯವರು ಏಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ? ಸಿದ್ದರಾಮಯ್ಯ

Shilpa D
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‌ನ ಬಂಡಾಯ ಶಾಸಕರನ್ನು ಸ್ಪೀಕರ್ ಅನರ್ಹಗೊಳಿರುವ ಕ್ರಮವನ್ನು ಬಿಜೆಪಿ ಟೀಕಿಸುವುದರಲ್ಲಿ ಅರ್ಥವೇ ಇಲ್ಲ ಎಂದು ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಶಾಸಕರನ್ನು ಅನರ್ಹಗೊಳಿಸಿದ್ದಕ್ಕೆ ಬಿಜೆಪಿಯವರು ಏಕೆ ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ? ಅವರೇನು ಬಿಜೆಪಿಯ ಶಾಸಕರೇ? ಬಿಜೆಪಿ ನಾಯಕರಿಗೇಕೆ ಈ ಪರಿ ಕಾಳಜಿ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಕಮಲ ಮತ್ತು ಬಿಜೆಪಿಯ ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರ ನಷ್ಟ ಅನುಭವಿಸಬೇಕಾಯಿತು. ಬಿಜೆಪಿ ಮಾತು ನಂಬಿ ಪಕ್ಷಾಂತರಿಗಳು ಅನರ್ಹಗೊಂಡು ನಷ್ಟ ಅನುಭವಿಸಲಿದ್ದಾರೆ. 
ಇವೆಲ್ಲದರ ಲಾಭ ಪಡೆದದ್ದು  ಬಿಜೆಪಿ. ಇದೆಲ್ಲ ಬೆಳವಣಿಗೆಗಳನ್ನು ನೋಡಿದರೆ ಇವೆಲ್ಲವೂ ಬಿಜೆಪಿ ನಾಯಕರ ಪೂರ್ವ ನಿಯೋಜಿತ ಷಡ್ಯಂತರವಾಗಿರಬಹುದೇ? ಎಂ‌ಬ ಅನುಮಾನ ದಟ್ಟವಾಗಿದೆ. ಹೀಗಾಗಿ ಅನರ್ಹ ಶಾಸಕರು ಈಗಲಾದರೂ ಬಿಜೆಪಿ ಷಡ್ಯಂತ್ರದಿಂದ ಎಚ್ಚೆತ್ತುಕೊಳ್ಳಲು ಇದು ಸಕಾಲ ಎಂದರು.
SCROLL FOR NEXT