ರಾಜಕೀಯ

ನಿಮ್ಮ ಹತ್ತಿರ ಮಾತನಾಡುವುದು ಏನಿದೆ? ತಲೆಹರಟೆ ಪ್ರಶ್ನೆ ಕೇಳುತ್ತೀರಿ: ಮಾಧ್ಯಮಗಳ ಮೇಲೆ 'ಅನಿತಾ' ಪ್ರಹಾರ!

Shilpa D
ರಾಮನಗರ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಮಾಧ್ಯಮಗಳ ಎಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ನಿಮ್ಮ ಹತ್ತಿರ ಮಾತನಾಡುವುದು ಏನಿದೆ, ಕುಮಾರಣ್ಣ ಕೂಡ ನಿಮ್ಮ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಮಾಧ್ಯಮದವರು ತುಂಬಾ ಹಾಳಾಗಿದ್ದೀರಿ, ತಲೆ ಹರಟೆ ಪ್ರಶ್ನೆಗಳನ್ನು ಕೇಳುತ್ತರಿ ಎಂದು ಹರಿಹಾಯ್ದಿದ್ದಾರೆ. 
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಅನಿತಾ ಕುಮಾರಸ್ವಾಮಿ ಮಾತನಾಡಿದ ಅವರು ಪ್ರತಿಯೊಂದರಲ್ಲೂ ತಪ್ಪು ಹುಡುಕುವ, ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. 
ನೀವು  ಒಂದು ಗ್ರಾಪಂ ಚುನಾವಣೆ ಗೆದ್ದು ಕೆಲಸ ಮಾಡಿ ಗೊತ್ತಾಗುತ್ತೆ. ನಿಮಗೂ ಕೂಡ ಕಷ್ಟ ಗೊತ್ತಾಗುತ್ತೆ ಎಂದು ಸವಾಲು ಹಾಕಿದ್ದಾರೆ. 
SCROLL FOR NEXT