ರಾಜಕೀಯ

ಅವರಿಗೆ ವೋಟ್ ಹಾಕಿ, ನಮ್ಮತ್ರ ಕೆಲಸ ಕೇಳೋಕೆ ನಾಚಿಕೆಯಾಗಲ್ವಾ: ಸಚಿವ ಡಿ.ಸಿ.ತಮ್ಮಣ್ಣ

Shilpa D
ಮದ್ದೂರು: ನಿಖಿಲ್ ಕುಮಾರಸ್ವಾಮಿ  ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ನಾಲಿಗೆ ಸ್ಥಿಮಿತ ಕಳೆದುಕೊಂಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ವೇಳೆ ಮತ ಹಾಕದ ಜನರ ವಿರುದ್ಧ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಮದ್ದೂರಮ್ಮ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಘಟಕದ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಕೇಳಿಕೊಂಡಿದ್ದರು. ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. 
ಇನ್ನೇನು ಜೋಡೆತ್ತುಗಳು ಬರುತ್ತಾವೆ ಕರೆದು ಹತ್ತಿಸಿಕೊಳ್ಳಿ, ಸಮಸ್ಯೆಗೆ ಪರಿಹಾರ ಕೂಡಲು ಇಲ್ಲಿಗೆ ಬರ್ತಾವಾ? ಈಗ ಮೆಡಗಾರಿಕೆ ಮಾಡಲು ಬರ್ತೀರಾ ಆಗ ಎಲ್ಲೋಗಿತ್ತು ಎಂದು ಪರೋಕ್ಷವಾಗಿ ಚಾಲೆಂಜಿಂಗ್ ಸ್ಟಾರ್ ನಟ  ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ನಟ ಯಶ್ ವಿರುದ್ಧ ಸಚಿವ ತಮ್ಮಣ್ಣ ವಾಗ್ದಾಳಿ ನಡೆಸಿದ್ದಾರೆ.
SCROLL FOR NEXT