ರಾಜಕೀಯ

ಫಾರೂಖ್ ಗೆ ಸ್ಥಾನ ನೀಡಿದ್ರೆ ಅಹಿಂದಕ್ಕೆ ಸ್ಥಾನ ಕೊಟ್ಟಂತೆ ಆಗ್ತಿತ್ತು: ಅಪ್ಪ-ಮಗನಿಗೆ ವಿಶ್ವನಾಥ್ ಗುದ್ದು!

Shilpa D
ಬೆಂಗಳೂರು: ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅಲ್ಪ ಸಂಖ್ಯಾತರಿಗೆ ಅವಕಾಶ ನೀಡಲೇ ಬೇಕಿತ್ತು, ಫಾರೂಕ್ ಗೆ ಸ್ಥಾನ ಕೊಟ್ಟಿದ್ದರೇ, ಒಬ್ಬ ಅಲ್ಪ ಸಂಖ್ಯಾತ ಒಬ್ಬ ಹಿಂದುಳಿದ ವರ್ಗ, ಒಬ್ಬ ದಲಿತರಿಗೆ ಅವಕಾಶ ಕೊಟ್ಟಂತೆ ಆಗುತ್ತಿತ್ತು ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ,  ರಾಜೀನಾಮೆ ಅಂಗೀಕರಿಸಲು ದೇವೇಗೌಡರ ಮನವೊಲಿಸುತ್ತೇನೆ. ದೇವೇಗೌಡರು ನನ್ನ ಮನವೊಲಿಸುವ ಮೊದಲೇ ಅವರ ಮನವೊಲಿಸುತ್ತೇನೆ.  ದೇವೇಗೌಡರು ಊಟಕ್ಕೆ ಕರೆದಿದ್ದಾರೆ ಹೋಗುತ್ತೇನೆ, ಅಲ್ಲಿ ಅವರ ಮನವೊಲಿಸುತ್ತೇನೆ ಎಂದು ಎಚ್. ವಿಶ್ವನಾಥ್ ಹೇಳಿದ್ದಾರೆ. 
ಪ್ರಮುಖವಾಗಿ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಪುಸ್ತಕ ಸೇರಿದಂತೆ ಹತ್ತಾರು ಸಮಸ್ಯೆಗಳಿವೆ. ಮಹೇಶ್ ರಾಜೀನಾಮೆ ಕೊಟ್ಟ ನಂತರ ಇಲಾಖೆಗೆ ಮುಖ್ಯಸ್ಥರೇ ಇಲ್ಲದಂತಾಗಿದೆ. ಈ ಇಲಾಖೆಗೆ ತುರ್ತಾಗಿ ಒಬ್ಬ ಸಚಿವರು ಬೇಕಾಗಿದ್ದಾರೆ. ಸಿಎಂ ಬಳಿ ಅಬಕಾರಿ ಸೇರಿದಂತೆ ಹಲವು ಖಾತೆಗಳಿವೆ. ಕೆಲವನ್ನು ಬೇರೆಯವರಿಗೆ ಹಂಚಿಕೆ ಮಾಡಲಿ ಎಂದು ಸಲಹೆ ನಿಡಿದ್ದಾರೆ.
ಪಕ್ಷೇತರರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಮಾಡದ ವಿಚಾರವಾಗಿ.ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
SCROLL FOR NEXT