ರಾಜಕೀಯ

ಮಂಡ್ಯ: ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ ಭೇಟಿ; ಕೊನೆಕ್ಷಣದಲ್ಲಿ ರದ್ದು ಮಾಡಿದ ಸುಮಲತಾ!

Shilpa D
ಬೆಂಗಳೂರು: ಮಂಡ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತರ ಮನೆಗಳಿಗೆ ನೀಡಬೇಕಾಗಿದ್ದ ಭೇಟಿಯನ್ನು ಸಂಸದೆ ಸುಮಲತಾ ಅಂಬರೀಷ್ ಕೊನ ಗಳಿಗೆಯಲ್ಲಿ ರದ್ಧುಪಡಿಸಿದ್ದಾರೆ.
ನಾಗಮಂಗಲದ ಹೇತೋಗನಹಳ್ಳಿ ಹಾಗೂ ಕೆ.ಆರ್.ಪೇಟೆಯ ಆಘಲಯ ಹಾಗೂ ದೊಡ್ಡತರಹಳ್ಳಿ ಗ್ರಾಮಕ್ಕೆ  ಸುಮಲತಾ ಬರುತ್ತಾರೆ  ಮೃತ ರೈತರ ಕುಟುಂಬಕ್ಕೆ ಸಾಂತ್ವನ‌ ಮತ್ತು ಆರ್ಥಿಕ ನೆರವು ಸಿಗುತ್ತದೆ ಎಂಬ ಭರವಸೆ ಇಟ್ಟುಕೊಂಡಿದ್ದರು. 
ಜೊತೆಗೆ ಸುಮಲತಾ ಗ್ರಾಮಕ್ಕೆ ಬರುತ್ತಾರೆಂದು ಸಮಸ್ಯೆ ಹೇಳಿಕೊಳ್ಳಲು ಕಾದು ಕುಳಿತ್ತಿದ್ರು. ಕಡೆಗೆ ಸುಮಲತಾ ಬರುವುದಿಲ್ಲವೆಂದು ತಿಳಿದು ನಿರಾಶೆಗೊಂಡರು.
ಅನಾರೋಗ್ಯ ಕಾರಣದಿಂದ ಅದನ್ನ ಮಂಡ್ಯ ಭೇಟಿ ರದ್ಧು ಮಾಡಿದ್ದು ಮತ್ತೆ ಯಾವಾಗ ಮಂಡ್ಯಕ್ಕೆ ಭೇಟಿ ಮಾಡಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
SCROLL FOR NEXT