ಬೆಂಗಳೂರು: ಪಂಚತಾರಾ ಹೋಟೆಲ್ ವಾಸ್ತವ್ಯದ ಬಗ್ಗೆ ಪ್ರಶ್ನಿಸುವ ಮೂಲಕ 'ಪೈವ್ ಸ್ಟಾರ್ ' ಮುಖ್ಯಮಂತ್ರಿ ಎಂದು ಬಿಂಬಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಂಚತಾರಾ ಹೋಟೆಲ್ ವಾಸ್ತವ್ಯ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದು ನನ್ನ ವೈಯಕ್ತಿಕ ವಿಷಯ. ನನ್ನ ಪ್ರಜ್ಞೆಗೆ ತಕ್ಕಂತೆ ಕೆಲಸ ಮಾಡುತ್ತೇನೆ.ಹೋಟೆಲ್ ವಾಸ್ತವ್ಯದ ವೆಚ್ಚವನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನಾ? ಎಂದು ಪ್ರಶ್ನಿಸಿದರಲ್ಲದೇ, ಈ ವಿಚಾರದಲ್ಲಿ ಪ್ರತಿಪಕ್ಷ ಬಿಜೆಪಿ ಗೆಳೆಯರಿಂದ ಯಾವುದೇ ಸರ್ಟಿಫಿಕೆಟ್ ಪಡೆಯುವ ಅಗತ್ಯವಿಲ್ಲ ಎಂದರು.
ಕುಮಾರಸ್ವಾಮಿ ಪಂಚತಾರಾ ಹೋಟೆಲ್ ನಲ್ಲಿ ಅಧಿಕಾರಗಳ ಸಭೆ ನಡೆಸುತ್ತಾರೆ. ಆ ಹೋಟೆಲ್ ಅವರ ಮತ್ತೊಂದು ಅಧಿಕೃತ ಮನೆಯಂತಾಗಿದೆ ಎಂಬಂತಹ ಮಾತುಗಳು ಇತ್ತೀಚಿಗೆ ಕೇಳಿಬಂದಿತ್ತು. ಈ ವಿಚಾರದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ತೀವ್ರ ಟೀಕೆಗಳನ್ನು ಎದುರಿಸಬೇಕಾಗಿತ್ತು.
ನಿಜವಾಗಿಯೂ ಮುಖ್ಯಮಂತ್ರಿ ಜನರ ಪ್ರತಿನಿಧಿಯಾಗಿದ್ದರೆ ಪಂಚತಾರಾ ಸಂಸ್ಕೃತಿಯನ್ನು ಮುಖ್ಯಮಂತ್ರಿ ಕೈ ಬಿಡಬೇಕೆಂದು ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದರು.
ಜೂನ್ 22 ರಂದು ಚಂದ್ರಕಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಪೈವ್ ಸ್ಟಾರ್ ಉಪಚಾರವನ್ನು ನಿರಾಕರಿಸಿದ ಮುಖ್ಯಮಂತ್ರಿ, ರಸ್ತೆ ಬದಿಯಲ್ಲಿಯೂ ವಾಸ್ತವ್ಯ ಮಾಡಲು ಸಿದ್ಧವಿರುವುದಾಗಿ ಹೇಳಿದ್ದರು. ಮೂಲಸೌಕರ್ಯ ಇಲ್ಲದೆ ಪ್ರತಿದಿನ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ಬಿಜೆಪಿಯವರನ್ನು ಕೇಳಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಪ್ರತಿಕ್ರಿಯಿಸಿದರು