ರಾಜಕೀಯ

ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಕಾಪಾಡಿದರು, ಖರ್ಗೆ ಪುತ್ರ ವ್ಯಾಮೋಹ ಮೆರೆದರು: ಉಮೇಶ್ ಜಾಧವ್

Nagaraja AB
ಚಿಂಚೋಳಿ: ಕಾಂಗ್ರೆಸ್  ಪಕ್ಷದ  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ್ ಜಾಧವ್,  ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಮೈತ್ರಿ ಸರ್ಕಾರದ‌ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಮ್ಮ ಮಗನನ್ನು ಮಂತ್ರಿ ಮಾಡದೇ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದರು. ಆದರೆ ನಮ್ಮ ಜಿಲ್ಲೆಯಲ್ಲಿ ಹಿರಿಯ ನಾಯಕರು ಪುತ್ರ ವ್ಯಾಮೋಹಕ್ಕೆ ಆದ್ಯತೆ ನೀಡಿದರು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ  ಉಮೇಶ್ ಜಾದವ್ ಹರಿ ಹಾಯ್ದರು.
SCROLL FOR NEXT