ರಾಜಕೀಯ

ಮನೆಗೆ ಊಟಕ್ಕೆ ಕರೆದು ಗೃಹಸಚಿವರಿಗೆ ಮಾಜಿ ಸಚಿವ ಮಲ್ಲಿಕಾರ್ಜುನ್ ಮಂಗಳಾರತಿ!

Shilpa D
ದಾವಣಗೆರೆ:  ಶಾಮನೂರು ಶಿವಶಂಕರಪ್ಪ ಮನೆಗೆ ಊಟಕ್ಕೆ ಆಗಮಿಸಿದ್ದ ಗೃಹ ಸಚಿವ ಎಂಟಿ ಪಾಟೀಲ್ ಅವರನ್ಹು ಶಾಮನೂರು ಶಿವಶಂಕರಪ್ಪ ಪುತ್ರ ಎಸ್‌ಎಸ್‌ ಮಲ್ಲಿಕಾರ್ಜುನ್‌ ಫುಲ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ವಿಷದ ಸಂಬಂಧ ತಮ್ಮ ತಂದೆ ಶಾಮನೂರು ಶಿವಶಂಕರಪ್ಪ ವಿರುದ್ಧ ಮಾತನಾಡಿದ್ದ ಎಂಬಿ ಪಾಟೀಲ್‌ ಅವರನ್ನು ಮಲ್ಲಿಕಾರ್ಜುನ್‌ ತರಾಟೆಗೆ ತೆಗೆದುಕೊಂಡರು.
ನಾವು ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದೇವೆ, ನೀನು ನನ್ನ ಅಪ್ಪನ ವಿರುದ್ಧ ಮಾತನಾಡುತ್ತೀಯಾ, ನೀನು ಏನೋ ಈಗ ಮಿನಿಸ್ಟರ್ ಆಗಿದ್ದೀಯಾ ಎಂದು ಕ್ಲಾಸ್ ತೆದೆದುಕೊಂಡಿದ್ದಾರೆ. 
ಈ ವೇಳೆ ಮಲ್ಲಿಕಾರ್ಜುನ್ ಅವರನ್ನು ಸಮಾಧಾನ ಪಡಿಸಲು ಪಾಟೀಲ್ ಯತ್ನಿಸಿದರೂ ಅವರು ಸುಮ್ಮನಾಗಿಲಿಲ್ಲ, ಈ ವೇಳೆ ಅಲ್ಲಿ ನೆರೆದಿದ್ದವರನ್ನೆಲ್ಲಾ ಹೊರಗೆ ಕಳುಹಿಸಲಾಯಿತು. ನಂತರ ಮದ್ಯ ಪ್ರವೇಶಿಸಿದ ಶಾಮನೂರು ಶಿವಶಂಕರಲ್ಲಿ ಮಗನನ್ನು ಸಮಾಧಾನ ಪಡಿಸಿದರು.
SCROLL FOR NEXT