ರಾಜಕೀಯ

ಮಂಡ್ಯದಿಂದ ಸುಮಲತಾ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿಸುವ ಆಸೆ ಇತ್ತು: ಅವರು ಸಂಧಾನಕ್ಕೆ ಒಪ್ಪಲಿಲ್ಲ: ಡಿ.ಸಿ ತಮ್ಮಣ್ಣ

Shilpa D
ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ಕೊಡಿಸುವ ಆಸೆಯಿತ್ತು ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿದ್ದಾರೆ.
ಈ ಸಂಬಂಧ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಲತಾ ಅವರ ಜೊತೆ ಸಂಧಾನಕ್ಕೆ ನಾನು ಪ್ರಯತ್ನಿಸಿದ್ದೆ, ನಾನು ಮತ್ತು ನನ್ನ ಮಗ ಯತ್ನಿಸಿದ್ದೇವೆ,ಮಧು ಹಾಗೂ ಹೊನ್ನೇಗೌಡ ಎಂಬವರು ಸಂಧಾನ ಮಾಡಿದ್ದರು ಆದರೆ ಸುಮಲತಾ ಅವರೇ ಇದಕ್ಕೆ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದಾರೆ,
ಸುಮಲತಾ ಅವರು ಜೆಡಿಎಸ್ ಟಿಕೆಟ್ ಕೊಡಿಸಿ ಎಂದು ಕೇಳಬಹುದಿತ್ತು, ಆದರೆ ಅವರು ಅದಕ್ಕೆ ಒಲವು ತೋರಲಿಲ್ಲ, ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡುವ ಆಸಕ್ತಿ ತೋರಲಿಲ್ಲ ಎಂದು ತಿಳಿಸಿದ್ದಾರೆ. ಕುಮಾರಸ್ವಾಮಿ ಅವರ ಬಳಿ ಸುಮಲತಾ ಕೇಳಲಿಲ್ಲ, ಅವರು ನಾವು ಸಂಬಂಧಿಗಳು, ಕುಟುಂಬದ ಮಧ್ಯೆ ಭಿನ್ನಾಭಿಪ್ರಾಯ  ಬೇಡವೆಂದು ನಾನು ಈ ಯತ್ನ ಮಾಡಿದ್ದೇನೆ ಎಂದು ಹೇಳಿದ್ದಾರೆ.
SCROLL FOR NEXT