ಜಿಎಸ್ ಬಸವರಾಜು - ದೇವೇಗೌಡ 
ರಾಜಕೀಯ

ತುಮಕೂರಿಗೆ ನಾನೇ ಮಣ್ಣಿನ ಮಗ, ದೇವೇಗೌಡ ದ್ವೇಷದ ರಾಜಕಾರಣ ಬಿಡಲಿ: ಜಿ.ಎಸ್. ಬಸವರಾಜು

ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗನೇ ಹೊರತು ತುಮಕೂರಿಗಲ್ಲ. ತುಮಕೂರಿಗೆ ನಾನೇ ಮಣ್ಣಿನ ಮಗ. ವಯೋವೃದ್ಧರಾಗಿರುವ...

ಬೆಂಗಳೂರು: ದೇವೇಗೌಡರು ಹಾಸನಕ್ಕೆ ಮಾತ್ರ ಮಣ್ಣಿನ ಮಗನೇ ಹೊರತು ತುಮಕೂರಿಗಲ್ಲ. ತುಮಕೂರಿಗೆ ನಾನೇ ಮಣ್ಣಿನ ಮಗ. ವಯೋವೃದ್ಧರಾಗಿರುವ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಈಗಲಾದರೂ ದ್ವೇಷದ ರಾಜಕಾರಣ ಬಿಟ್ಟು ನೆಮ್ಮದಿಯ ರಾಜಕಾರಣ ಮಾಡಲಿ ಎಂದು ತುಮಕೂರು ಕ್ಷೇತ್ರದ ನೂತನ ಬಿಜೆಪಿ ಸಂಸದ ಜಿ.ಎಸ್. ಬಸವರಾಜು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು ರಾಜಕಾರಣದಲ್ಲಿ ಹಲವರನ್ನು ಮುಗಿಸಿದಂತೆ ತಮ್ಮನ್ನೂ ಎರಡೂ ಬಾರಿ ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದ್ದರು. ಈಗ ಆಕಸ್ಮಿಕವಾಗಿ ಅವರೇ ನನ್ನ ಕೈಗೆ ಸಿಕ್ಕಿ ಹಾಕಿಕೊಂಡರು. ಅವರಿಗೆ ಜಿಲ್ಲೆಯ ಜನರೇ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ತುಮಕೂರಿಗೆ ಹೇಮಾವತಿ ನೀರು ಹರಿಯದಂತೆ ದೇವೇಗೌಡ ಹಾಗೂ ಅವರ ಮಗ ರೇವಣ್ಣ ಜನರಿಗೆ ಮೋಸ ಮಾಡಿದ್ದು, ಅವರ ಮೋಸವೇ ಅವರಿಗೆ ತಿರುಗುಬಾಣವಾಗಿದೆ. ವಯಸಿನಲ್ಲಿ ಹಿರಿಯರಾದ ಗೌಡರು ಈಗಲಾದರೂ ಮಹಾಘಟ್ ಬಂಧನ್ ಎನ್ನುವುದನ್ನೆಲ್ಲಾ ಬಿಟ್ಟು ನೆಮ್ಮದಿಯಾಗಿರಲಿ ಎಂದು ಕಿವಿಮಾತು ಹೇಳಿದರು. 
ಲೋಕಸಭಾ ಚುನಾವಣೆಯಲ್ಲಿ ತಮ್ಮ ಹಾಗೂ ದೇವೇಗೌಡರ ನಡುವೆ ಸಮರ ನಡೆದಿತ್ತು. ಕಾಂಗ್ರೆಸ್‍ ಪಕ್ಷದಲ್ಲಿಯೂ ತಮಗೆ ಸ್ನೇಹಿತರಿದ್ದು, ಅವರು ನನ್ನ ಗೆಲುವಿಗೆ ಸಹಕಾರ ನೀಡಿರಬಹುದೇನೋ ..ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

"ಭಾರತೀಯರು ಬಗ್ಗದೇ ಹೋದರೆ...": ಹತಾಶಗೊಂಡ ಟ್ರಂಪ್ ಸಲಹೆಗಾರನಿಂದ ನೇರಾನೇರ ಬೆದರಿಕೆ!

SCO summit: ಟ್ರಂಪ್ ಗೆ ಸೆಡ್ಡು; ಚೀನಾ, ರಷ್ಯಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಭೆಗೆ ಪ್ರಧಾನಿ ಮೋದಿ ಸಜ್ಜು; ದಿಗ್ಗಜರ ಸಮಾಗಮದ ಮೇಲೆ ಜಗತ್ತಿನ ಕಣ್ಣು!

BJP, RSS ನಡುವೆ ಭಿನ್ನಾಭಿಪ್ರಾಯ ಇರಬಹುದು, ಆದರೆ ಸಂಘರ್ಷ ಇಲ್ಲ: ಮೋಹನ್ ಭಾಗವತ್

ಧರ್ಮಸ್ಥಳ ಪ್ರಕರಣ: ದೂರುದಾರನ ಮಂಪರು ಪರೀಕ್ಷೆಗೆ ಸೌಜನ್ಯ ತಾಯಿ ಒತ್ತಾಯ; ಹೊಸ ದೂರು ದಾಖಲು!

News headlines 28-08-2025| ಚಾಮುಂಡಿ ದೇವರು ಹಿಂದೂಗಳ ಆಸ್ತಿ ಅಲ್ಲ- DK Shivakumar; ಪ್ರಮೋದಾ ದೇವಿ ಒಡೆಯರ್ ಪ್ರತಿಕ್ರಿಯೆ ಏನು..?; ರಾಜ್ಯದಲ್ಲಿ ಹಲವೆಡೆ IMD Yellow alert; ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಮತ್ತೆ ED ಕಸ್ಟಡಿಗೆ

SCROLL FOR NEXT