ರಾಜಕೀಯ

ಕುಮಾರಸ್ವಾಮಿ ಊಸರವಳ್ಳಿ ರೀತಿ,ಯಾವಾಗ ಬಣ್ಣ ಬದಲಿಸ್ತಾರೆ ಎಂಬುದು ಗೊತ್ತಾಗಲ್ಲ : ಬಿ.ಸಿ.ಪಾಟೀಲ್ 

Shilpa D

ಹಾವೇರಿ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿದರು, ಹಿರೆಕೆರೂರು ಕ್ಷೇತ್ರದ ಅಭಿವೃದ್ಧಿಗೆ ಒಂದಿಷ್ಟೂ ಸಹಕಾರ ನೀಡಲಿಲ್ಲ. ಆದ್ದರಿಂದಲೇ ನಾವು ಕಾಂಗ್ರೆಸ್​ನಿಂದ ಹೊರಬಂದು ನಮ್ಮ ದಾರಿ ನೋಡಿಕೊಳ್ಳಲು ನಿರ್ಧರಿಸಿದ್ದಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿರೆಕೆರೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಸುಪ್ರೀಂ ಕೋರ್ಟ್​ಎಂದ ಮೇಲೆ ವಾದ, ಪ್ರತಿ ವಾದ, ವಿಚಾರಣೆ, ಮುಂದೂಡಿಕೆ ಎಲ್ಲವೂ ಸಾಮಾನ್ಯವಾಗಿರುತ್ತದೆ. ಈ ಪ್ರಕರಣದಲ್ಲಿ ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ,ಸ್ಪೀಕರ್​ ಅವರನ್ನು ಮಾತ್ರ ಪ್ರತಿವಾದಿ ಯಾಗಿ ಮಾಡಿದ್ದೇವೆ.

ಹಾಗಾಗಿ, ಪಾರ್ಟಿ ಅಲ್ಲದವರ ಬಗ್ಗೆ ಯಾರು ಏನೋ ಹೇಳಿದರೂ ನ್ಯಾಯಪೀಠ ಅದರ ಬಗ್ಗೆ ತಲೆಕೆಡಿ ಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅವರ ವಿಡಿಯೋ ಸಾಕ್ಷ್ಯದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

SCROLL FOR NEXT