ರಾಜಕೀಯ

ಯಡಿಯೂರಪ್ಪ, ಸಿದ್ದರಾಮಯ್ಯ ಇಬ್ಬರಿಗೂ ಅಧಿಕಾರ ಸಿಕ್ಕಿದೆ- ಬಿ. ಸಿ. ಪಾಟೀಲ್ ವ್ಯಂಗ್ಯ 

Nagaraja AB

ಹಿರೇಕೆರೂರು: 17 ಅನರ್ಹ ಶಾಸಕರು  ರಾಜೀನಾಮೆ ನೀಡಿದ ಪರಿಣಾಮವಾಗಿ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಇಬ್ಬರೂ ಅಧಿಕಾರ ಅನುಭವಿ ಸುವಂತೆ ಆಯಿತು.ಇದರಿಂದ ಎರಡು ಪಕ್ಷದ ನಾಯಕರು ಲಾಭ ಪಡೆದರು ಎಂದು ಅನರ್ಹ ಶಾಸಕ ಬಿಸಿ ಪಾಟೀಲ್​ ತಿಳಿಸಿದ್ದಾರೆ

ಹಂಸಭಾವಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು,ನಮ್ಮ ರಾಜೀನಾಮೆಯಿಂದಾಗಿ ಯಡಿಯೂರಪ್ಪ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಯಾದರು.ಇದರ ಜೊತೆಗೆ  ಮೈತ್ರಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಧಿಕಾರವಿಲ್ಲದಿದ್ದ ಸಿದ್ದರಾಮಯ್ಯ ಈಗ ವಿರೋಧ ಪಕ್ಷದ ನಾಯಕರಾದರು ಎಂದರು. 

ನಾವು 16 ಜನ ಮೈತ್ರಿ ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಅವರಿಗೆ ವಿಪಕ್ಷ ನಾಯಕ ಸ್ಥಾನಮಾನ ಸಿಕ್ಕಿತು.ಈಗ ಅವರಿಗೆ ಸರ್ಕಾರಿ ಕಾರು,ಬಂಗಲೆ ಎಲ್ಲವೂ ಸಿಕ್ಕಿದೆ ಎಂದು ಹೇಳುವ ಮೂಲಕ ಎಲ್ಲರಿಗೂ ಅಧಿಕಾರ ಸಿಗಲಿ ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಬಿ. ಸಿ. ಪಾಟೀಲ್ ವ್ಯಂಗ್ಯವಾಡಿದರು. 

SCROLL FOR NEXT