ರಾಜಕೀಯ

ಸಿಎಂ ಯಡಿಯೂರಪ್ಪರನ್ನು ಹಾಡಿ ಹೊಗಳಿದ ಕಾಂಗ್ರೆಸ್ ಶಾಸಕ

Lingaraj Badiger

ತುಮಕೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೋರಾಟವನ್ನು ಚಿಕ್ಕವನಿಂದ ನೋಡಿಕೊಂಡು ಬಂದಿದ್ದೆನೆ. ಅವರು ನಾಡಿಗೆ ಕೊಟ್ಟ ಕೊಡುಗೆ ಅಪಾರವಾಗಿದ್ದು, ನೇರ, ನಿಷ್ಠುರವಾದಿ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ರಂಗನಾಥ್ ಹಾಡಿ ಹೊಗಳಿದ್ದಾರೆ.

ಯಡಿಯೂರಪ್ಪ ಅವರು ರೈತರ ಪರ ಮಾಡಿದ ಹೋರಾಟ ನೋಡಿದ್ದೆ. ಕುಣಿಗಲ್ ತಾಲೂಕಿನ ಮೇಲೆ ಅವರ ಆಶೀರ್ವಾದ ಇರಲಿ. ರಾಜಕೀಯ ಎಂಬುದು ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಅಭಿವೃದ್ಧಿಯಲ್ಲಿ ರಾಜಕೀಯ ಇರಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 617ಕೋಟಿ ರೂ ಲಿಂಕಿಂಗ್ ಕೆನಾಲ್ ಗಾಗಿ ಅನುದಾನ ಬಿಡುಗಡೆ ಮಾಡಿದರು. ಆದರೆ, ತುಮಕೂರಿನ ನಾಯಕರು ಅದನ್ನು ತಡೆಹಿಡಿದಿದ್ದಾರೆ. ಮುಖ್ಯಮಂತ್ರಿಗಳು ಈ ವಿಷಯವನ್ನು ಗಮನಿಸಬೇಕು ಎಂದು ಪರೋಕ್ಷವಾಗಿ ಸಂಸದ ಜಿ.ಬಸವರಾಜು ಅವರಿಗೆ ಟಾಂಗ್ ನೀಡಿದರು.

ಸಂಸದ ಜಿ.ಎಸ್.ಬಸವರಾಜು ಅವರೇ, ಯಾವ ಕಾರಣಕ್ಕಾಗಿ ನೀವು ಲಿಂಕಿಂಗ್ ಕೆನಾಲ್ ತಡೆದಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

SCROLL FOR NEXT