ಬೆಂಗಳೂರು: ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಗಿದು ತೀರ್ಪು ಹೊರಬೀಳಬಹುದು.ಬಳಿಕಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕೊಂಡ ಮುಖ್ಯಮಂತ್ರಿಗೆ ಸುಪ್ರೀಂ ಕೋರ್ಟ್ ಜೊತೆಗೆ ಚುನಾವಣಾ ಆಯೋಗ ಶಾಕ್ ನೀಡಿತ್ತು.ಆದರೆ ವಿಚಾರಣೆ ಮುಂದೂಡಿದ ಬೆನ್ನಲ್ಲೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಂಪುಟದ ಸಚಿವರು ನಿರಾಳರಾಗಿದ್ದಾರೆ.
ಅನರ್ಹರ ತೀರ್ಪು ಹೊರ ಬೀಳುವವರೆಗೂ ಬಳಿಕವೂ ಅಂದರೆ ಚುನಾವಣೆ ಫಲಿತಾಂಶ ಹೊರಬೀಳುವವರೆಗೂ ಅನರ್ಹ 17 ಶಾಸಕರಿಗೆ ಯಾವುದೆ ಸಾಂವಿಧಾನಿಕ ಹುದ್ದೆ ನೀಡುವಂತಿಲ್ಲ.ಹೀಗಾಗಿ ಅನರ್ಹ ಶಾಸಕರಿಗೆ ಮೀಸಲಿಡಲಾಗಿದ್ದ14 ಖಾತೆಗಳನ್ನು ಹಾಲಿ ಸಚಿವರಿಗೆ ಮರು ಹಂಚಿಕೆ ಮಾಡಿದ್ದಾರೆ.
ಖಾತೆ ಮರು ಹಂಚಿಕೆ ಕುರಿತಂತೆ ರಾಜ್ಯಪತ್ರ ಹೊರಡಿಸಲಾಗಿದೆ