ರಾಜಕೀಯ

ಬಿಜೆಪಿ ಗೂಂಡಾ ಪಕ್ಷವಾಗಿ ಬದಲಾಗಿ ಬಿಟ್ಟಿದೆ: ದಿನೇಶ್ ಗುಂಡೂರಾವ್ ಕಿಡಿ

Nagaraja AB

ಬೆಂಗಳೂರು:  ಬಿಜೆಪಿ ಗೂಂಡಾ ಪಕ್ಷವಾಗಿ ಬದಲಾಗಿ ಬಿಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಯಲಹಂಕ ಸೃಷ್ಠಿ ಕಾಲೇಜು ಘಟನೆ ಸಂಬಂಧ ಎಸ್.ಆರ್. ವಿಶ್ವನಾಥ್ ವಿರುದ್ಧ ಕಿಡಿಕಾರಿದರು. ಶಾಸಕ ವಿಶ್ವನಾಥ್, ಉಳಿದ ಕಾರ್ಯಕರ್ತರು ಗೂಂಡಾಗಳು. ಗೂಂಡಾಗಳ ರೀತಿ ಸೃಷ್ಟಿ ಕಾಲೇಜಿನಲ್ಲಿ ವರ್ತನೆ ಮಾಡಿದ್ದಾರೆ. ಬಿಜೆಪಿ ಗೂಂಡಾ ಪಾರ್ಟಿಯಾಗಿ ಬದಲಾಗಿಬಿಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಈ ಮಧ್ಯೆ  ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಸರಿಯಲ್ಲ, ಆದಷ್ಟು ಬೇಗ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಇನ್ನೂ ವಿಳಂಬ ಮಾಡಕೊಡದು, ವಿಳಂಬವಾದರೆ ಗೊಂದಲ ಹೆಚ್ಚಾಗುತ್ತದೆ. ಆದಷ್ಟು ಬೇಗ ಈ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

SCROLL FOR NEXT