ರಾಜಕೀಯ

ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು: ಬಿಕೆ ಹರಿಪ್ರಸಾದ್

Vishwanath S

ಬೆಂಗಳೂರು: "ಅಪ್ಪ ತನಗಾಗಿ ಹೆಣ್ಣು ಹುಡುಕಲು ಹೋದಾಗ ಮಗನಿಗೆ ಮದುವೆ ಆಯಿತು" ಎನ್ನುವ ಗಾದೆ ತಮಗೂ ಅನ್ವಯವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಮಾರ್ಮಿಕವಾಗಿ ಹೇಳಿದ್ದಾರೆ. 

ರಾಜ್ಯಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ತಮಗೆ ಅವಕಾಶ ಸಿಗಲಿಲ್ಲ. ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಲಭಿಸಿತು. ರಾಜ್ಯಸಭೆಗೆ ಟಿಕೆಟ್ ಕೇಳಲು ಹೋದ ತಮಗೆ ವಿಧಾನಪರಿಷತ್ ಪ್ರವೇಶಿಸಲು ಅವಕಾಶ ದೊರೆತಿದೆ ಎನ್ನುವುದಕ್ಕೆ ಈ ಗಾದೆಯನ್ನು ಉಲ್ಲೇಖಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಕೆಟ್ ಬಗ್ಗೆ ನಿರೀಕ್ಷೆಯಿರಲಿಲ್ಲ. ಆದರೂ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದೆ. ಖರ್ಗೆಯವರಿಗಾಗಿ ನಾನು ರಾಜ್ಯಸಭೆ ಸ್ಥಾನ ತ್ಯಾಗಮಾಡಿಲ್ಲ. ಹೈಕಮಾಂಡ್ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧನಾಗಿದ್ದೇ ಎಂದರು.

SCROLL FOR NEXT