ರಾಜಕೀಯ

ಎಪಿಸೋಡ್ ಬೇಕಾದರೆ ಬಿಡುಗಡೆ ಮಾಡಲಿ: ಅಶ್ವತ್ಥನಾರಾಯಣ್‌ಗೆ ಡಿಕೆಶಿ ತಿರುಗೇಟು 

Nagaraja AB

ಬೆಂಗಳೂರು: ರಾಮನಗರ ಉಸ್ತುವಾರಿ ಹಾಗೂ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ , ನನ್ನ ಬಗ್ಗೆ ಬೇಕಾದ ಎಪಿಸೋಡ್ ಬಿಡುಗಡೆ ಮಾಡಲಿ,ದೊಡ್ಡವರ ಬಗ್ಗೆ ತಾವು ತಿರುಗಿ ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ಲಾಕ್ ಡೌನ್ ಘೋಷಿಸುವ ಅಧಿಕಾರ ಡಿಕೆಶಿಗೆ ಇಲ್ಲ ಎಂಬ ಅಶ್ವತ್ಥನಾರಾಯಣ ಅವರ ಮಾತಿಗೆ ತಿರುಗೇಟು ನೀಡಿದರು.

ಕನಕಪುರ ನನ್ನ ಮತಕ್ಷೇತ್ರ. ಶಾಸಕನಾಗಿ ಕ್ಷೇತ್ರದಲ್ಲಿ ನಾನು ನನ್ನ‌ ಕರ್ತವ್ಯ ಮಾಡಿದ್ದೇನೆ.ಅಶ್ವತ್ಥ ನಾರಾಯಣ್ ಅವರು ಸರ್ಕಾರದ ಭಾಗವಾಗಿದ್ದಾರೆ. ಅವರು ದೊಡ್ಡವರು ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವ ವಿಚಾರ ಸರ್ಕಾರಕ್ಕೆ ಬಿಟ್ಟ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದರು.

SCROLL FOR NEXT