ರಾಜಕೀಯ

ಕೊರೊನಾ ಬಗ್ಗೆ ಜಂಗಿಕುಸ್ತಿ: ಎಚ್ ಕೆ ಪಾಟೀಲ್ ಮತ್ತು ಸಚಿವ ಸುಧಾಕರ್ ನಡುವೆ ಟ್ವೀಟ್ ವಾರ್

Vishwanath S

ಬೆಂಗಳೂರು: ಕೊರೊನಾ ಸೋಂಕಿತರು ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಆಗಮಿಸುತ್ತಿರುವವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ.ಪಾಟೀಲ್ ಹಾಗೂ ವೈದ್ಯಕೀಯ ಸಚಿವ ಡಾ.ಸುಧಾಕರ್ ನಡುವೆ ಟ್ವಿಟ್ಟರ್ ವಾರ್ ನಡೆದಿದೆ.

ಕಳೆದ ಎರಡು ದಿನದಲ್ಲಿ ವಿದೇಶಗಳಿಂದ ಬೆಂಗಳೂರಿಗೆ ಸುಮಾರು 2 ಸಾವಿರಕ್ಕೂ  ಹೆಚ್ಚು ಜನರು ಆಗಮಿಸಿದ್ದಾರೆ. ರಾಜ್ಯ ಸರ್ಕಾರ ಅವರನ್ನು ಸೂಕ್ತ ರೀತಿಯಲ್ಲಿ ಪರೀಕ್ಷೆ  ನಡೆಸಬೇಕು ಎಂದು ಎಚ್.ಕೆ ಪಾಟೀಲ್ ಟ್ವೀಟ್ ಮಾಡಿದ್ದರು.

ಅವರ ಟ್ವೀಟ್ ಗೆ ಪ್ರತಿಕ್ರಿಯಸಿದ್ದ ಡಾ.  ಸುಧಾಕರ್ ವಿದೇಶಗಳಿಂದ ಅಷ್ಟೊಂದು ಪ್ರಮಾಣದಲ್ಲಿ ಜನರು ಆಗಮಿಸುತ್ತಿಲ್ಲ. ಹಿರಿಯ  ನಾಯಕರಿಗೆ ಸಂಖ್ಯೆಯ ಸಮಸ್ಯೆ ಇದ್ದ ಹಾಗಿದೆ ಎಂದು ಟಾಂಗ್ ನೀಡಿದ್ದರು.

SCROLL FOR NEXT