ರಾಜಕೀಯ

ಕೃಷಿ ವಿಜ್ಞಾನಿ ಸ್ವಾಮಿನಾಥನ್ ಇನ್ನೂ ಬದುಕಿದ್ದಾರೆ: ವಿವಾದಕ್ಕೀಡಾದ ಗೃಹ ಸಚಿವರ ಟ್ವೀಟ್ 

Nagaraja AB

ಬೆಂಗಳೂರು: ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ.ಸ್ವಾಮಿ ನಾಥನ್ ನಿಧನರಾಗಿದ್ದಾರೆಂಬ ಸುಳ್ಳು ಸುದ್ದಿ ನಂಬಿದ ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವಾಮಿನಾಥನ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ವಿಪರ್ಯಾಸ ವೆಂದರೆ ಬಳಿಕ ಟ್ವೀಟನ್ನು ಡಿಲಿಟ್ ಮಾಡುವ ಮೂಲಕ ತಪ್ಪನ್ನು ಸರಿಪಡಿಸಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಸ್ವಾಮಿನಾಥನ್ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ದಾಂಜಲಿ ಸಂದೇಶವನ್ನು ನೀಡಿದ್ದರು. ನಂತರ ತಪ್ಪು ಮಾಹಿತಿ ಕಾರಣ ಅದನ್ನು ಡಿಲಿಟ್ ಮಾಡಲಾಗಿದೆ. ಸ್ವಾಮಿನಾಥನ್ ಬಗ್ಗೆ ಮಾಡಿದ ಪೋಸ್ಟ್ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಅವರು ಟ್ವೀಟ್ ಮಾಡಿದ್ದಾರೆ. 

SCROLL FOR NEXT