ರಾಜಕೀಯ

ನಳಿನ್ ಕುಮಾರ್ ಕಟೀಲ್ ಒಬ್ಬ ಕಾಮಿಡಿ ಕಿಲಾಡಿ: ಕೆಪಿಸಿಸಿ

Nagaraja AB

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ತಲೆ ಹೊಂದಿದ ಕಾಮಿಡಿ ಕಿಲಾಡಿ ಎಂದು ರಾಜ್ಯ ಕೆಪಿಸಿಸಿ ಟೀಕಿಸಿದೆ.

ನಳಿನ್ ಮಾತುಗಳು ಯಕ್ಷಗಾನದಲ್ಲಿ ಬರುವ ಹಾಸ್ಯ ಪ್ರಸಂಗದಂತೆ. ನಳಿನ್ ದೊಡ್ಡವರ ಬಗ್ಗೆ ಮಾತಾಡಿದರೆ ದೊಡ್ಡವನಾಗುತ್ತೇನೆ ಎನ್ನುವ ಭ್ರಮೆ ಬಿಡಬೇಕೆಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.

ಉಪಚುನಾವಣೆಯಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಪರಸ್ಪರ ಅಭ್ಯರ್ಥಿಗಳನ್ನು ಸೋಲಿಸಲು ತಂತ್ರ ರೂಪಿಸಿದ್ದಾರೆಂಬ ನಳಿನ್ ಟ್ವೀಟ್ ಹೇಳಿಕೆಯನ್ನು ಖಂಡಿಸಿರುವ ಕೆಪಿಸಿಸಿ, ಆರ್ ಆರ್ ನಗರದಲ್ಲಿ "ಮುನಿರತ್ನರಿಗೆ ಮುನಿದ ಮುನಿರಾಜು" ಎನ್ನುವ ಸ್ಥಿತಿಯನ್ನು ನಿಭಾಯಿಸಲಾಗದ, ಕೈಲಾಗದ ರಾಜ್ಯಾಧ್ಯಕ್ಷ. ಶಿರಾದಲ್ಲಿ ಬಿಜೆಪಿ ಪಕ್ಷಕ್ಕೆ ದುಡಿದವರ ಬಿಟ್ಟು ವಲಸಿಗರಿಗೆ ಟಿಕೆಟ್ ನೀಡಿದ್ದಕ್ಕೆ ನಿಮ್ಮ ಕಾರ್ಯಕರ್ತರೇ ಚುನಾವಣೆಗೆ ನಿರಾಸಕ್ತರಾಗಿರುವುದನ್ನು ಇಂತ ಮಾತುಗಳಿಂದ ಮರೆಮಾಚುವ ತಂತ್ರ ನಡೆಯದು ಎಂದು ಟ್ವೀಟ್ ಮೂಲಕ ತಿರುಗೇಟು ನೀಡಿದೆ.

SCROLL FOR NEXT