ಶಿರಾ ಉಪ ಚುನಾವಣೆಯಲ್ಲಿ ಗೆದ್ದ ರಾಜೇಶ್ ಗೌಡ 
ರಾಜಕೀಯ

ಈ ಬಾರಿಯ ಚುನಾವಣೆಯಲ್ಲಿ ಕುಂಚಟಿಗ-ಒಕ್ಕಲಿಗ ನಿಷ್ಠಾವಂತ ಮತಗಳು ಬಿಜೆಪಿಗೆ!

ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.

ತುಮಕೂರು: ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.

ಶಿರಾ ಉಪ ಚುನಾವಣೆಯಲ್ಲಿ ಡಾ ಸಿಎಂ ರಾಜೇಶ್ ಗೌಡ ಗೆದ್ದರೆ, ಪರಿಷತ್ ಸ್ಥಾನ ಚಿದಾನಂದ ಎಂ ಗೌಡ ಪಾಲಾಗಿದೆ. ಈ ಹಿಂದೆ ಈ ಎರಡೂ ಕ್ಷೇತ್ರಗಳು ಜೆಡಿಎಸ್ ನ ಕೈಯಲ್ಲಿದ್ದವು. 

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಬಿ ಸತ್ಯನಾರಾಯಣ ಗೆದ್ದು ಶಾಸಕರಾಗಿದ್ದರು. ಅವರ ನಿಧನ ನಂತರ ಚುನಾವಣೆ ಅನಿವಾರ್ಯವಾಗಿತ್ತು. ಈ ಬಾರಿ ಉಪ ಚುನಾವಣೆಯಲ್ಲಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದ್ದರೂ ಕೂಡ ಸ್ಥಾನ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗಲಿಲ್ಲ.

ಮೊರಸು ಒಕ್ಕಲಿಗ ಸಮುದಾಯದಿಂದ ಆರ್ ಚೌಡರೆಡ್ಡಿ ತೂಪಳ್ಳಿ ಆಗ್ನೇಯ ಪದವೀಧರ ಕ್ಷೇತ್ರದಿಂದ 2014ರಲ್ಲಿ ಚುನಾಯಿತರಾಗಿ ಬಂದಿದ್ದರು. ಈ ಬಾರಿ ಬಿಜೆಪಿ ತಂತ್ರಗಾರಿಕೆಯಿಂದ ಚಿದಾನಂದ ಗೌಡ ಅವರನ್ನು ಬೆಂಬಲಿಸಿತು. ಕುಂಚಟಿಗ-ಒಕ್ಕಲಿಗರಾದ ಅವರು ಮತಗಳಿಸಿ ಗೆದ್ದರು. ತುಮಕೂರಿನ ಲಿಂಗಾಯತ ಸಮುದಾಯತ ಮತಗಳು, ಚಿತ್ರದುರ್ಗ, ದಾವಣಗೆರೆಯ ಕುಂಚಟಿಗ ಒಕ್ಕಲಿಗ ಮತಗಳಿಂದ ಅವರಿಗೆ ಸಹಾಯವಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT