ಶಿರಾ ಉಪ ಚುನಾವಣೆಯಲ್ಲಿ ಗೆದ್ದ ರಾಜೇಶ್ ಗೌಡ 
ರಾಜಕೀಯ

ಈ ಬಾರಿಯ ಚುನಾವಣೆಯಲ್ಲಿ ಕುಂಚಟಿಗ-ಒಕ್ಕಲಿಗ ನಿಷ್ಠಾವಂತ ಮತಗಳು ಬಿಜೆಪಿಗೆ!

ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.

ತುಮಕೂರು: ಬಿಜೆಪಿಗೆ ಈಗ ಡಬಲ್ ಸಂಭ್ರಮ. ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆ, ಆಗ್ನೇಯ ಪದವೀಧರ ಕ್ಷೇತ್ರಗಳ ಚುನಾವಣೆಯಲ್ಲಿ ಕೇಸರಿ ಪಕ್ಷ ರಾರಾಜಿಸಿದ್ದು ಕುಂಚಟಿಗ-ಒಕ್ಕಲಿಗ ಮತಗಳು ಬಿಜೆಪಿ ಪಾಲಾಗಿವೆ.

ಶಿರಾ ಉಪ ಚುನಾವಣೆಯಲ್ಲಿ ಡಾ ಸಿಎಂ ರಾಜೇಶ್ ಗೌಡ ಗೆದ್ದರೆ, ಪರಿಷತ್ ಸ್ಥಾನ ಚಿದಾನಂದ ಎಂ ಗೌಡ ಪಾಲಾಗಿದೆ. ಈ ಹಿಂದೆ ಈ ಎರಡೂ ಕ್ಷೇತ್ರಗಳು ಜೆಡಿಎಸ್ ನ ಕೈಯಲ್ಲಿದ್ದವು. 

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನ ಬಿ ಸತ್ಯನಾರಾಯಣ ಗೆದ್ದು ಶಾಸಕರಾಗಿದ್ದರು. ಅವರ ನಿಧನ ನಂತರ ಚುನಾವಣೆ ಅನಿವಾರ್ಯವಾಗಿತ್ತು. ಈ ಬಾರಿ ಉಪ ಚುನಾವಣೆಯಲ್ಲಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದ್ದರೂ ಕೂಡ ಸ್ಥಾನ ಪಡೆಯಲು ಜೆಡಿಎಸ್ ಗೆ ಸಾಧ್ಯವಾಗಲಿಲ್ಲ.

ಮೊರಸು ಒಕ್ಕಲಿಗ ಸಮುದಾಯದಿಂದ ಆರ್ ಚೌಡರೆಡ್ಡಿ ತೂಪಳ್ಳಿ ಆಗ್ನೇಯ ಪದವೀಧರ ಕ್ಷೇತ್ರದಿಂದ 2014ರಲ್ಲಿ ಚುನಾಯಿತರಾಗಿ ಬಂದಿದ್ದರು. ಈ ಬಾರಿ ಬಿಜೆಪಿ ತಂತ್ರಗಾರಿಕೆಯಿಂದ ಚಿದಾನಂದ ಗೌಡ ಅವರನ್ನು ಬೆಂಬಲಿಸಿತು. ಕುಂಚಟಿಗ-ಒಕ್ಕಲಿಗರಾದ ಅವರು ಮತಗಳಿಸಿ ಗೆದ್ದರು. ತುಮಕೂರಿನ ಲಿಂಗಾಯತ ಸಮುದಾಯತ ಮತಗಳು, ಚಿತ್ರದುರ್ಗ, ದಾವಣಗೆರೆಯ ಕುಂಚಟಿಗ ಒಕ್ಕಲಿಗ ಮತಗಳಿಂದ ಅವರಿಗೆ ಸಹಾಯವಾಯಿತು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

SCROLL FOR NEXT