ಬೊಮ್ಮಾಯಿ, ಸವದಿ, ಕಾರಜೋಳ 
ರಾಜಕೀಯ

'ಜನತಾ ಪರಿವಾರ' ದಿಂದ ಬಂದವರಿಗೆ ಮಣೆ: ಪಕ್ಷ ನಿಷ್ಠರ ಕಡೆಗಣನೆ; ಸಂಘಪರಿವಾರದ ನಾಯಕರು ಮೂಲೆಗುಂಪು?

ಬೊಮ್ಮಾಯಿ ಮುಖ್ಯಮಂತ್ರಿ ಆಗುವುದರ ಮೂಲಕ ಇಂತಹ ಚರ್ಚೆಗಳು ಆರಂಭವಾಗಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಹೊರಗಿನಿಂದ ಬಂದವರಿಗೆ ಪ್ರಮುಖ ಹುದ್ದೆಗಳನ್ನು ನೀಡುತ್ತಿರುವುದು, ಆರ್ ಎಸ್ ಎಸ್ ತತ್ವಸಿದ್ಧಾಂತಗಳಿಗೆ ಬದ್ಧವಾಗಿರುವ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಗಳೂರು: 2008 ರ ವಿಧಾನಸಭೆ ಚುನಾವಣೆ ವೇಳೆ ಹೊರಗಿನವರು ಮತ್ತು ಒಳಗಿನವರು ಎಂಬ ಮಾತು ಕೇಳಿ ಬಂತು, ಅದಾದ ನಂತರ 2019ರಲ್ಲಿ ಮೂಲ ಮತ್ತು ವಲಸಿಗರು ಎಂದು ವಾಕ್ಸಮರ ನಡೆದಿತ್ತು.

ಸದ್ಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗುವುದರ ಮೂಲಕ ಇಂತಹ ಚರ್ಚೆಗಳು ಆರಂಭವಾಗಿವೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಬಿಟ್ಟು ಹೊರಗಿನಿಂದ ಬಂದವರಿಗೆ ಪ್ರಮುಖ ಹುದ್ದೆಗಳನ್ನು ನೀಡುತ್ತಿರುವುದು, ಆರ್ ಎಸ್ ಎಸ್ ತತ್ವಸಿದ್ಧಾಂತಗಳಿಗೆ ಬದ್ಧವಾಗಿರುವ ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಸಾರ್ವಜನಿಕ ವಲಯದಲ್ಲಿ ಈ ರೀತಿಯ ಚರ್ಚೆ ನಡೆಯತ್ತಿದ್ದು, ಸಾಮೂಹಿಕ ಸಂದೇಶ ಅಪ್ಲಿಕೇಶನ್‌ಗಳು ಪಕ್ಷದ ನಿಷ್ಠಾವಂತರು ವ್ಯಕ್ತಪಡಿಸಿದ ಅಸಮಾಧಾನವನ್ನು ಪ್ರಸಾರ ಮಾಡುವ ಮಾಧ್ಯಮವಾಗುತ್ತಿವೆ.

ನೂತನವಾಗಿ ನೇಮಕವಾಗಿರುವ ಸಿಎಂ ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ಬಂದವರು, ಯಡಿಯೂರಪ್ಪ ಅವಧಿಯಲ್ಲಿ ಉಪಮುಖ್ಯಮಂತ್ರಿಗಳಾಗಿದ್ದ ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳ ಅವರು ಕೂಡ ಜನತಾ ಪರಿವಾರದಿಂದ ಬಂದವರು ಎಂಬ ಸಾಲುಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿವೆ. ಜನತಾ ಪರಿವಾರದ ನಾಯಕರು ನಿಧಾನವಾಗಿ ಸಂಘ ಪರಿವಾರದ ಮುಖಂಡರನ್ನು ಪಕ್ಷದಿಂದ ಆಚೆ ತಳ್ಳುತ್ತಿದ್ದಾರೆ ಎಂಬ ಸಂದೇಶ ವೈರಲ್ ಆಗುತ್ತಿದೆ.

ಪಕ್ಷ ನಿಷ್ಠರನ್ನು ಕಡೆಗಣಿಸಲಾಗುತ್ತಿದೆ, ಬೇರೆ ಪಕ್ಷದಿಂದ ಬಂದವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುವ ಜೊತೆಗೆ ಮಹತ್ವದ ಹುದ್ದೆ ಮತ್ತು ಜವಾಬ್ದಾರಿಗಳನ್ನು ನೀಡಲಾಗುತ್ತಿದೆ. 

ಭಿನ್ನಮತೀಯ ಸಂದೇಶವು ಬಿಜೆಪಿಯ ಮೂಲ ತತ್ವಗಳು ಹಿಂದುತ್ವ, ಹಿಂದೂ ಮತಗಳು, ಹಿಂದೂ ಧರ್ಮದ ರಕ್ಷಣೆ, ಹಿಂದೂ ರಾಷ್ಟ್ರದ ಸಾಕ್ಷಾತ್ಕಾರ ರಾಷ್ಟ್ರೀಯತೆಯಲ್ಲಿದೆ ಮತ್ತು ಇತರ ಪಕ್ಷಗಳಿಂದ ಬಂದ ಜನರಿಗೆ ಆದ್ಯತೆ ನೀಡುವುದು ಅದರ ತತ್ವಗಳಿಗೆ ಧಕ್ಕೆ ತರುತ್ತಿದೆ ಎಂದು ಹೇಳಲಾಗುತ್ತಿದೆ.

ಪಕ್ಷದ ಹಿರಿಯರಿಗೆ ಅತೃಪ್ತಿಯ ಬಗ್ಗೆ ಚೆನ್ನಾಗಿ ತಿಳಿದಿದೆ ಮತ್ತು ಕ್ಯಾಬಿನೆಟ್ ರಚನೆಯು ಎಲ್ಲಾ ಅನುಮಾನಗಳನ್ನು ನಿವಾರಿಸುತ್ತದೆ ಎಂದು ಆಶಿಸುತ್ತಿದ್ದಾರೆ. 

ಕೇಡರ್ ಹೆಚ್ಚು ಭಾವನಾತ್ಮಕವಾಗಿದೆ. ಅವರಿಗೆ ರಾಜಕೀಯ ಆಯ್ಕೆಗಳು ಅರ್ಥವಾಗುವುದಿಲ್ಲ. ಪಕ್ಷ ಮತ್ತು ಅದರ ಸಿದ್ಧಾಂತಕ್ಕೆ ಬದ್ಧರಾಗಿರುವ ಯಾರಾದರೂ ವ್ಯವಹಾರಗಳ ಚುಕ್ಕಾಣಿ ಹಿಡಿಯಬೇಕೆಂದು ಅವರು ಬಯಸುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ಬಸವರಾಜ ಕ್ಯಾಬಿನೆಟ್ ರಚನೆ ಮತ್ತು  ನಿಗಮ-ಮಂಡಳಿಗಳ ನೇಮಕಾತಿ ಭವಿಷ್ಯದಲ್ಲಿ ಭುಗಿಲೇಳಬಹುದಾದ ಯಾವುದೇ ಭಿನ್ನಾಭಿಪ್ರಾಯದ ಮುನ್ಸೂಚನೆಯಾಗಿದೆ ಎಂದು ಹೇಳಿದ್ದಾರೆ. ಜನತಾದಳ ತೊರೆದು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ 2013 ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉಂಟಾಗಿದ್ದ ಭಾವನೆ ಸದ್ಯ ಬಿಜೆಪಿ ಪಾಳಯದಲ್ಲೂ ಮೂಡಿದೆ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT