ರಾಜಕೀಯ

'ವರ ಕೊಟ್ಟವರ ತಲೆಯ ಮೇಲೆ ಉರಿ ಹಸ್ತ ಇಡಲು ಹೊರಟರೆ ಅವರು ಬಿಡುತ್ತಾರೆಯೇ, ಸಿದ್ದರಾಮಯ್ಯನವರೇ?'

Shilpa D

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ಗೆ ದೂರು ನೀಡಿದ್ಧಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ, ಮೂಲ ಕಾಂಗ್ರೆಸ್ಸಿಗರಿಗೆ ಈಗ ಅಸ್ಥಿತ್ವದ ಭಯ ಕಾಡುತ್ತಿದೆ. ಇದೊಂದು ರೀತಿ ಭಸ್ಮಾಸುರನ ಕತೆಯಂತೆ ಆಗಿದೆ.  ವರ ಕೊಟ್ಟವರ ತಲೆಯ ಮೇಲೆ ಉರಿ ಹಸ್ತ ಇಡಲು ಹೊರಟರೆ ಅವರು ಬಿಡುತ್ತಾರೆಯೇ, ಸಿದ್ದರಾಮಯ್ಯ ಅವರೇ ಎಂದು ಪ್ರಶ್ನಿಸಿದೆ.

ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ‌ ಕರ್ನಾಟಕದ ಟ್ವಿಟ್ಟರ್‌ ಪ್ರವಚನಕಾರ ಸಿದ್ದರಾಮಯ್ಯನವರೇ, ನೀವು ಏನೂ ಕೆಲಸ ಮಾಡುವುದಿಲ್ಲ ಬರೇ ಬುರುಡೆ ಬಿಡುವುದು, ಸಂತೆ ಭಾಷಣ ಕೊಡುವುದು ಎಂದು ಆರೋಪಿಸಿ ನಿಮ್ಮವರೇ ಹೈಕಮಾಂಡ್‌ಗೆ ದೂರು ನೀಡಿದ್ದಾರೆ, ಬಹುಶಃ, ಅವರೆಲ್ಲ ಮೂಲ ಕಾಂಗ್ರೆಸ್ಸಿಗರಾಗಿರಬಹುದಲ್ಲವೇ ಎಂದು ಬಿಜೆಪಿ ತಿರುಗೇಟು ನೀಡಿದೆ

SCROLL FOR NEXT