ಜಮೀರ್ ಅಹ್ಮದ್ ಖಾನ್ 
ರಾಜಕೀಯ

ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ: ಜಮೀರ್ ಅಹ್ಮದ್

ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ, ಜಮೀರ್ ನನ್ನು ಕಟ್ಟಿಹಾಕಬಹುದೆಂದು ಯಾರಾದರೂ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಬೆಂಗಳೂರು: ನನ್ನದು 100ರ ವೇಗವೇ ಹೊರತು 90 ಸ್ಪೀಡ್ ಅಲ್ಲ, ಜಮೀರ್ ನನ್ನು ಕಟ್ಟಿಹಾಕಬಹುದೆಂದು ಯಾರಾದರೂ ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಇಡಿ ದಾಳಿ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀರ್,  ದಾಳಿ ನಡೆಸುವ ಬಗ್ಗೆ ನೋಟಿಸ್ ಆಗಲೀ, ಎಫ್.ಐ.ಆರ್ ಆಗಲೀ ಇರಲಿಲ್ಲ. ಆದರೆ ನಿರೀಕ್ಷೆ ಇಟ್ಟುಕೊಂಡು ದಾಳಿ ಮಾಡಿಸಿದವರಿಗೆ ನಿರಾಸೆಯಾಗಿದೆ. ಯಾವುದೇ ನೋಟಿಸ್ ನೀಡದೇ ದಾಳಿ ಮಾಡಿದಾಗ ಅಚ್ಚರಿಗೊಂಡು ಆ ಬಗ್ಗೆ ಕೇಳಿದೆ. ಐಟಿ ಅವರು ಬರಬೇಕಿತ್ತು ಆದರೆ ನೀವು ಏಕೆ ಬಂದಿದ್ದೀರಿ ಎಂದು ಕೇಳಿದಾಗ ದೂರು ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿರುವುದಾಗಿ ಹೇಳಿದರು. ಅವರಿಗೆ ಸಹಕಾರ ನೀಡುವುದು ನಮ್ಮ ಜವಾಬ್ದಾರಿ. ಹೀಗಾಗಿ ಇಡಿಯವರಿಗೆ ಮನೆ ವಿವರ, ಖರ್ಚುವೆಚ್ಚ ಕಾಮಗಾರಿ ವಿವರ ಮನೆ ದಾಖಲೆ ಕೇಳಿದಾಗ ನೀಡಿದ್ದೇನೆ. ಬ್ಯಾಂಕಿನಲ್ಲಿ ಪ್ಲೆಡ್ಜ್ ಇಟ್ಟಿದ್ದು,ನಂತರ ಕೊಡುವುದಾಗಿ ಹೇಳಿದ್ದೇನೆ ಎಂದರು.

ದುಬಾರಿ ಮನೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜಮೀರ್ ಅಹ್ಮದ್, ಮನೆ ಕಟ್ಟಬಾರದು ಎಂದು ಎಲ್ಲಿಯಾದರೂ ಇದೆಯೇ? ಯಾರ ತಲೆ ಒಡೆದು ಮಾಡಿದ್ದೇನೆಯೇ? ಮನೆ ಕಟ್ಟಿದ್ದಕ್ಕೆ ಈ ರೀತಿ ಮಾಡಿದ್ದಾರೆ. ದೇವರು ಇವರಿಗೆ ಒಳ್ಳೆಯದು ಮಾಡುತ್ತಾನೆಯೇ? ಹೆಚ್.ಡಿ.ಕುಮಾರಸ್ವಾಮಿ ಹೆಸರನ್ನು ನಾನು ಎಲ್ಲಿಯಾದರೂ ಹೇಳಿದ್ದೀನಾ ಎಂದು ಪ್ರಶ್ನಿಸಿದ ಜಮೀರ್ ಅಹ್ಮದ್, ಕುಮಾರಸ್ವಾಮಿ ಹೀಗೆ ದೂರು ತಾವು ಕೊಟ್ಟಿಲ್ಲವೆಂದು ನಾನು ಹೇಳದಿದ್ದರೂ ಇವರಾಗಿಯೇ ಹೇಳಿದ್ದನ್ನು ನೋಡಿದರೆ ಕುಮಾರಸ್ವಾಮಿ ಅವರ ಮೇಲೆ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ಐಎಂಎಗೆ ಭೂಮಿ ಮಾರಿದ್ದು, ಅದರ ಸಂಪೂರ್ಣ ವಿವರವನ್ನು ಈ ಹಿಂದೆ 2019 ರಲ್ಲಿಯೇ ನೀಡಿದ್ದೆ. ನಮ್ಮ ವಿರುದ್ದ ಇಡಿಗೆಲ್ಲ, ಐಟಿಗೆಲ್ಲ ದೂರು ಕೊಟ್ಟಿದ್ದಾರಂತೆ. ಅವರ ಕುಟುಂಬಕ್ಕೆ ಒಳ್ಳೆದಾಗಲೀ ನನ್ನ ಕುಟುಂಬ ಹಾಳಾಗಲಿ, ಬೀದಿಗೆ ಬರಲಿ. ನನ್ನ ವಿರುದ್ಧ ಯಾರು ರೀತಿ ಮಾಡಿದ್ದಾರೋ ಆ ಕುಟುಂಬಕ್ಕೆ ಹೇಳುತ್ತಿದ್ದೇನೆ. ರಾಜಕೀಯ ಮಾಡಲಿ. ಆದರೆ ಮನೆ ವಿಚಾರಕ್ಕೂ ಹೀಗೆ ರಾಜಕೀಯ ಮಾಡುತ್ತಾರೆ ಎಂದರೆ ಅದು ಸರಿಯಲ್ಲ. 15 ದಿನಗಳ ಕಾಲಾವಕಾಶ ಕೊಟ್ಟರೆ ಯಾರು ಮಾಡಿದ್ದಾರೆ ಎಂದು ದಾಖಲೆ ಸಹಿತ ಬಹಿರಂಗ ಪಡಿಸುತ್ತೇನೆಂದು ಮಾಧ್ಯಮದವರನ್ನುದ್ದೇಶಿಸಿ ಜಮೀರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT