ರಾಜಕೀಯ

ಬಿಎಸ್ ವೈ ನೇತೃತ್ವ ಸರ್ಕಾರಕ್ಕೆ 2 ವರ್ಷ: ಒಂದೆಡೆ ಸಾಧನಾ ಪರ್ವ ಸಮಾರಂಭ, ಮತ್ತೊಂದೆಡೆ ರಾಜಭವನಕ್ಕೆ ಸ್ಪೀಕರ್ ಭೇಟಿ 

Sumana Upadhyaya

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತದೆ ಎಂಬ ಊಹಾಪೋಹಗಳ ನಡುವೆ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಾಧನಾ ಸಮಾವೇಶ ನಡೆಯುತ್ತಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸಾಧನಾ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದಿಯಾಗಿ ಸರ್ಕಾರದ ಸಚಿವರು, ಅಧಿಕಾರಿಗಳು ಭಾಗವಹಿಸಿದ್ದಾರೆ.

ರಾಜಭವನಕ್ಕೆ ಸ್ಪೀಕರ್: ಕುತೂಹಲಕಾರಿ ನಡೆಯೊಂದರಲ್ಲಿ ಇದೀಗ ತಾನೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜಭವನಕ್ಕೆ ತೆರಳಿದ್ದಾರೆ. ಅವರು ರಾಜ್ಯಪಾಲರನ್ನು ಏಕೆ ಭೇಟಿ ಮಾಡಲು ಹೋಗಿದ್ದಾರೆ ಎಂಬುದು ನಿಗೂಢವಾಗಿದೆ.

ಇನ್ನೊಂದೆಡೆ ಸಮಾವೇಶ ಮುಂದುವರಿಯುತ್ತಿದ್ದು ಹೈಕಮಾಂಡ್ ನಿಂದ ಯಡಿಯೂರಪ್ಪನವರ ರಾಜೀನಾಮೆಗೆ ಸಂದೇಶ ಬಂದಿಲ್ಲ, ಸಿಎಂ ಬದಲಾವಣೆ ಬಗ್ಗೆ ನಮಗೆ ಗೊತ್ತಿಲ್ಲ, ನಮಗೇನು ಮಾಹಿತಿಯಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟ ಸಹೋದ್ಯೋಗಿಗಳು ಹೇಳಿಕೆ ನೀಡುತ್ತಿದ್ದಾರೆ.

SCROLL FOR NEXT