ರಾಜಕೀಯ

ರಾಜ್ಯದ ಜನತೆಗೆ ಬಿಜೆಪಿ ಒಂದು ದೊಡ್ಡ ಶಾಪ: ಡಿ ಕೆ ಶಿವಕುಮಾರ್ 

Sumana Upadhyaya

ಮೈಸೂರು: ಬಿಜೆಪಿ ಹೈಕಮಾಂಡ್ ಮತ್ತು ರಾಜ್ಯ ನಾಯಕರಿಗೆ ಸರಿಯಾದ ಯೋಜನೆಯೇ ಇಲ್ಲ, ರಾಜ್ಯಕ್ಕೆ ಗೌರವ ಹೇಗೆ ಕೊಡಬೇಕು, ಅಧಿಕಾರ ಹೇಗೆ ನೀಡಬೇಕೆಂಬ ಯೋಜನೆ, ಯೋಚನೆಗಳಾಗಲಿ ಇಲ್ಲ. ಇಂದಿನ ಕಷ್ಟದ ಪರಿಸ್ಥಿತಿಯಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂಬುದಿಲ್ಲ. ಅದು ಅವರ ಪದ್ಧತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಟೀಕಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಜನತೆಗೆ ಬಿಜೆಪಿ ಒಂದು ದೊಡ್ಡ ಶಾಪ. ರಾಜ್ಯ ಪ್ರವಾಸದಲ್ಲಿರುವ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ಜೊತೆ ಬೆಳಗ್ಗೆ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರಿಗೆ ಆಗಮಿಸಿದ ಅವರಿಗೆ ಕಾರ್ಯಕರ್ತರು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿತು, ಈ ಸಂದರ್ಭದಲ್ಲಿ ಡಿ ಕೆ ಶಿಗೆ ಜಯವಾಗಲಿ, ಮುಂದಿನ ಮುಖ್ಯಮಂತ್ರಿ ಎಂಬ ಕೂಗು ಸಹ ಕೇಳಿಬಂತು.

ನಿನ್ನೆ ಹುಬ್ಬಳ್ಳಿಯಲ್ಲಿ ಸಮಾವೇಶ ನಡೆಸಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಹುಬ್ಬಳ್ಳಿಯಿಂದ ರೈಲು ಮೂಲಕ ಇಂದು ಬೆಳಗ್ಗೆ ಮೈಸೂರಿಗೆ ಆಗಮಿಸಿದರು. ಇಬ್ಬರೂ ನಾಯಕರಿಗೆ ಕಾರ್ಯಕರ್ತರು ಪೇಟ, ಶಾಲು ತೊಡಿಸಿ ಸನ್ಮಾನಿಸಿದರು. ನಾದಸ್ವರದ ಪೂರ್ಣಕುಂಭ ಸ್ವಾಗತ ನೀಡಿದರು. ಮಧ್ಯೆ ಮಧ್ಯೆ ಡಿಕೆ...ಡಿಕೆ, ರಾಹುಲ್ ಗಾಂಧಿ ಕೀ,...ಸೋನಿಯಾ ಗಾಂಧಿ ಕೀ...ಜೈಘೋಷ ಕೇಳಿಬಂತು.

ನಂತರ ಇಬ್ಬರೂ ನಾಯಕರು ಮೈಸೂರಿನಲ್ಲಿರುವ ಇಂದಿರಾ ಗಾಂಧಿ ಕಾಂಗ್ರೆಸ್ ಭವನಕ್ಕೆ ಆಗಮಿಸಿದರು.ಮಹಿಳಾ ಅಭಿಮಾನಿಗಳು ಸಹ ಡಿ ಕೆ ಶಿವಕುಮಾರ್ ಮತ್ತು ಸುರ್ಜೇವಾಲಾ ಜೊತೆ ಫೋಟೋ ತೆಗೆಸಿಕೊಳ್ಳಲು ನಾ ಮುಂದು ತಾ ಮುಂದು ಎಂದು ನುಗ್ಗಿ ಬರುತ್ತಿದ್ದರು. 

SCROLL FOR NEXT