ರಾಜಕೀಯ

ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಂಜೆ ಸಚಿವ ಸಂಪುಟ ಸಭೆ

Sumana Upadhyaya

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಧಾನಿಗೆ ಬಂದು ಹೋದ ಮೇಲೆ ಬೆಳಗಾವಿಯಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ, ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುನ್ನ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಗುರುವಾರ ಮಹತ್ವದ ಸಂಪುಟ ಸಭೆ ನಡೆಯಲಿದ್ದು, ಸಂಜೆ 4 ಗಂಟೆಗೆ ಸಂಪುಟ ಸಭೆ ನಡೆಸಲಿದ್ದಾರೆ.

ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. SC-ST ಮೀಸಲು ಹೆಚ್ಚಳ ಅನುಷ್ಠಾನ ಸಂಬಂಧ ನಿರ್ಧಾರ, ಬೆಂಗಳೂರು ಸಬ್​ ಅರ್ಬನ್​​​ ರೈಲು ಯೋಜನೆ ಕುರಿತು ಚರ್ಚೆ, ಬೆಳಗಾವಿ ಚಳಿಗಾಲದ ಅಧಿವೇಶನದ ಬಗ್ಗೆ ಸಮಾಲೋಚನೆ ಮತ್ತು OBC ಸಮಿತಿ ವರದಿ ಸಂಬಂಧವೂ ಚರ್ಚಿಸುವ ಸಾಧ್ಯತೆಯಿದೆ.

SCROLL FOR NEXT